ನೀ ಬಿಟ್ಟು ಹೊದ ದಾರಿಯಲ್ಲಿ
ಒಬ್ಬಂಟಿ ಕನಸು ಒಂದು
ನನಸಾಗದ ತನ್ನತನಕೆ
ಕಂಬನಿಯಗರೆಯುತಿದೆ…
ಕೂಡಿ ಕಳೆದ ಕ್ಷಣಗಳಲ್ಲಿ
ಇರದ ಭೀತಿ ನೆರಳೊಂದು
ಸುಳಿವು ಕೊಡದೆ ದಾಳಿ ಮಾಡಿ
ಮನಸ ಘಾಸಿಗೊಳಿಸಿದೆ…
ಗುಲಾಬಿಯಂತೆ ನಳನಳಿಸುತ್ತಿದ್ದ
ಹೂವು ನೀನು ದುಂಬಿ ನಾನು
ಮಾಲಿ ಯಾರೊ ಬಂದನವನು
ಬೆಲೆಯ ಕಟ್ಟಿ ಕೊಂಡುಹೊದ…
ಹೃದಯ ಕಿತ್ತು ಹೊದ ಭಾವ
ನೆನಪು ಹೊತ್ತ ಎದೆಯ ತುಂಬಾ
ವಿರಹದುರಿಯು ಭಾರ ಭಾರ
ಜೊತೆಗೆ ಆಸರೆ ಕಣ್ಣ ನೀರ…
ನೀ ಬಿಟ್ಟು ಹೊದ ದಾರಿಯಲ್ಲಿ
ಒಂಟಿಯಾದ ಕನಸು ಒಂದು
ತನ್ನತನಕೆ ಹಳಿಯುತಿದೆ
ಒಂದೆ ಸಮನೆ ಕೊರಗುತಿದೆ…!!
ರಾಜ್…!!
—