Friday 19 December 2014

ಇಡಿಯಾಗಿ ಬದುಕಿನಲಿ
ಹಿಡಿಯಷ್ಟು ಪ್ರೀತಿಯನು
ಕೊಡದೆ ಕಾಡಿದಳು
ಕೊನೆವರೆಗೂ ಕೋಮಲೆಯು...

ತನ್ನ ಕನಸುಗಳೆಲ್ಲ
ಹೃದಯದಲಿ ಬಚ್ಚಿಟ್ಟು
ತನಗವಳೆ ಸರ್ವಸ್ವ
ಎಂಬ ಭ್ರಮೆಯೊಳಗೆ ಬದುಕಿದನು...

ಎದೆಯೊಳಗೆ ನೋವಿಟ್ಟು
ಹುಸಿನಗೆಯ ಲೇಪನದಿ
ಕೊನೆವರೆಗೂ ಅವಳ
ಖುಷಿಗಾಗಿ ಮಿಡಿದಿಹನು...

ಸಿಗದು ಮುರಳಿ ಪ್ರೀತಿಯೆಂದು
ಅರಿತ ರಾಧೆ ಕೂಡ ಒಮ್ಮೆ
ದೂರಲಿಲ್ಲ ಕೃಷ್ಣನನ್ನು
ದೂರದಿಂದ ಸುಖವ ಬಯಸಿ...

ನನ್ನ ರಾಧೆಗೇಕೊ ಕಾಣೆ
ಕರುಣೆ ಮಾತ್ರ ಬಾರಲಿಲ್ಲ
ನೆನಪು ಕೊಂದು ಬಿಟ್ಟರೂನು
ಮನಸು ಮಾತ್ರ ಮರೆಯುತಿಲ್ಲ...

ಇಡಿಯಾಗಿ ಬದುಕಿನಲಿ
ಹಿಡಿಯಷ್ಟು ಪ್ರೀತಿಯನು
ಕೊಡದೆ ಕಾಡಿದಳು
ಕೊನೆವರೆಗೂ ಕೋಮಲೆಯು...!!!

ರಾಜ್..!!

Monday 15 December 2014


ಕಾಣದ ದೇವರು ಕರುಣೆಯ ತೋರದೆ
ಕಾಣುವ ದೇವರ ತಾ ಕರೆದೊಯ್ದ
ಲೋಕದ ಕಾಯಕ ಮುಗಿಸಿದ ತಾಯಿ
ತಬ್ಬಲಿ ಮಾಡಿ ಹೋದಳು ದೂರ…

ಏನಂತ ಬರೆಯಲಿ ನಾನು
ಪದಗಳು ಮರಣಿಸಿವೆ
ಹೃದಯದ ತುಂಬೆಲ್ಲ ಅಮ್ಮನ ನೆನಪುಗಳೆ
ಈ ಬದುಕು ಮಾತ್ರ ಖಾಲಿ -ಖಾಲಿ…

ಹೆತ್ತಬ್ಬೆಯ ಮರಣ
ದಿಕ್ಕು ತಪ್ಪಿದೆ ಪಯಣ
ದುಃಖದ ಕರಿಮೋಡ
ಆ ವಿಧಿಯ ಅಟ್ಟಹಾಸ…

ನನ್ನುಸಿರು ಇರೊವರೆಗು
ನಿನ್ನಾಸೆಗಳ ಪೊರೈಸುವೆ
ಹರಸು ನೀ ನಮ್ಮನ್ನು
ನಿನ್ನಾತ್ಮಕೆ ಶಾಂತಿಯ ಕೋರುವೆ…!!

(ಅಗಲಿದ ಅಮ್ಮನಿಗೆ ಅಕ್ಷರಗಳ ಅಪ೯ಣೆ)
ಕಾಲನ
ಹೊಡೆತಕ್ಕೆ
ಸಿಲುಕಿ
ಅವಳ
ಕಲ್ಲು
ಬಂಡೆಯಂತಹ
ಹೃದಯ
ಕರಗುತ್ತಿದೆ
ಅದರೆ
ಪ್ರತಿಕ್ರಿಯಿಸಲು
ಸತ್ತ
ನನ್ನ
ಹೃದಯದ
ಭಾವನೆಗಳ
ಕಳೆಬರಹ
ಎಲ್ಲಿಂದ
ಹುಡುಕಿ
ತರಲಿ…!
ನಿನ್ನ ಮನದೊಳಗೆ
ಮುಸುಕಿನ ಗುದ್ದಾಟ ಸ್ನೇಹದ ಸಲುಗೆಯೊ ಪ್ರೀತಿಯ ಸೆಳೆತವೊ
ಅರಿಯದೆ ನಾ ಸೋತೆ…

ಕಣ್ಣ ಭಾಷೆಯು ಕಥೆಯನು ಹೇಳಿದೆ
ತುಟಿಯ ಅಂಚಲಿ ಮೌನದ ವಾಸ
ಮನದೊಳು ಮೊಳಗಿದೆ ಯುದ್ಧದ
ಘೋಷಣೆ ಸ್ನೇಹ -ಪ್ರೀತಿಯ ಭಾವಗಳ…

ಅರಿತುಕೊ ಹೆಣ್ಣೆ ಕಳೆಯುವ ಮುನ್ನ
ಪ್ರೀತಿಯ ಬಂಧಕೆ ಸ್ನೇಹವೇ ಸೇತುವೆ
ಕಾದ ಪ್ರೀತಿಗೆ ಕೊಲ್ಲುವುದು ತರವೇ…

ನನ್ನ ಹೃದಯದ ಬಡಿತವ
ಕಿವಿಗೊಟ್ಟು ಕೇಳು ಮನಸಾರೆ ಒಮ್ಮೆ
ಪ್ರತಿ ಉಸಿರುಸಿರಲು ನಿನ್ನ ಹೆಸರೇನೆ
ನಿನೊಪ್ಪದೆ ತೋರಿದ ಜಾಣ್ಮೆಯ ಮರೆವು…

ನಿನ್ನ ಮನದೊಳಗೆ
ಅವಿತಿರುವ ಭಾವನೆಗಳ
ಅರಿಯದ ಧ್ಯಾನಿ ನಾನು
ಅರಿತಿರುವ ಮೌನಿ ನೀನು…!!

rAಜ್…!!

ನಿನ್ನ ಕೆನ್ನೆ ಗುಳಿಯಲ್ಲೊಂದು
ನನ್ನದೊಂದು ಕನಸಿದೆ
ಕಣ್ಣ ನೋಟ ಕೂಡ ಮಿಂಚಿ
ಕಳ್ಳ ಸಂಚು ಮಾಡಿದೆ…

ಹೃದಯಕ್ಕೀಗ ಅಂಟುರೋಗ
ಬೆಸೆದ ನಿನ್ನ ನಂಟಿನೊಂದಿಗೆ
ಜಂಟಿಯಾಗು ಬೇಗ ನೀನು
ಒಂದು ತಂಟೆ ಮಾಡದೆ…

ತುಂಟತನಕೆ ತಾಯಿ ನೀನು
ನೆನಪಿನೊಳಗೆ ನುಸುಳಿ ಬಂದು
ಕನಸಿನಲ್ಲೂ ಹಾಜರಾಗುವ
ನನ್ನ ಪ್ರೀತಿಯ ದಾಸವಾಳ…

ಮನದಿ ಒಲವ ರಂಗವಲ್ಲಿ
ಬಿಡಿಸಿದಂಥ ಕೋಮಲಾಂಗಿ
ನಿನ್ನ ಕೆನ್ನೆ ಗುಳಿಯಲೊಂದು
ನನ್ನದೊಂದು ಕನಸಿದೆ…!!

ರಾಜ್…!!
ಅರಿಯದ ಬಂಧವು
ಜೊತೆಯಾದೊಡನೆ
ಸಲುಗೆಯ ಸ್ನೇಹದಿ
ಪ್ರೀತಿಯ ನೆರಳೇ…

ನಂಬಿಕೆ ತಳಹದಿ
ಬೆಳೆಯುವ ಪ್ರೀತಿಗೆ
ಮನಸಿನ ಹಂಬಲ
ಕನಸಿನ ಬೆಂಬಲ…

ಮುನಿಸಿನ ಗಾಳಿ
ಸುಳಿದರೆ ನಡುವೆ
ಕನಸಿಗೂ -ಮನಸಿಗು
ನೋವಿನ ನರಳು…

ವಿರಹದ ಉರಿಯಲಿ
ಹೃದಯದ ಯಾತನೆ
ಮನಗಳ ನಡುವಲಿ
ಅಗಲಿಕೆ ವೇದನೆ…

ಕನಸದು ಕನವರಿಸಿದೆ
ಮನಸಿನ ಜೊತೆ ಸೇರಿ
ಹುಡುಕುತ ದಣಿದು ಕೇಳಿವೆ ಎರಡು
ಎಲ್ಲಿದೆ ಪ್ರೀತಿಯ ನೆರಳು…?

ರಾಜ್…!!

Tuesday 28 October 2014


ಕಡಲ ದಡದಲ್ಲಿ
ನಿನಗಾಗಿ ಅಲೆದು
ಅಲೆಗಳೊಲಿದವು
ನೀನೊಲಿಯಲಿಲ್ಲ…

ಇನ್ನೂ ಕಾಯುತಿದೆ
ನನ್ನೊಲವಿನ ಭಾವ
ಸುರಿಯಬಹುದೆ ಎಂದು
ಒಲವಿನ ಮಳೆಗಾಗಿ…

ಅಲೆಗಳು ಬಿಕ್ಕಳಿಸಿವೆ
ನನ್ನಲೆದಾಟವ ಕಂಡು
ಪ್ರತಿ ಬಾರಿ ಮುನ್ನುಗ್ಗಿ ಬರುತಿವೆ
ಈ ಗೆಳೆಯನ ಸಂತೈಸಲು…

ಅಲೆಗಳ ಹೊಡೆತಕ್ಕೆ
ಕಲ್ಲು ಕರಗುವುದು
ನಿನ್ನ ಹೃದಯವ ಕರಗಲು
ಸಪ್ತ ಸಾಗರವೇ ಒಂದಾಗಿ ಬರಬೇಕೆ…!

ನೀ ಬಂದೆ ಬಾಳಲ್ಲಿ
ಬೇಸಿಗೆಯ ಮಳೆಯಂತೆ
ಮೋಡಗಳ ಸುಳಿವಿಲ್ಲ
ಕಾಮನಬಿಲ್ಲೊಂದು ಮೂಡಿದೆ…

ಬಳಿಯಲ್ಲಿ ನೀನಿರಲು
ನನ್ನ ಬಳಸಿರಲು
ತಂಗಾಳಿ ತಂಪಾಗಿ
ಮೈ ಸೋಕಿದ ಅನುಭವ…

ಚಂದ್ರಂಗೂ ಅಸೂಯೆ
ನೀ ನನ್ನ ವರಿಸಿರಲು
ಚುಕ್ಕೆಗಳು ಚದುರಿವೆ
ನಿನ್ನಂದವ ನೋಡಲು…

ಭೂತಾಯಿ ಮಡಿಲಲ್ಲಿ
ಪುಟ್ಟದೊಂದು ಗುಡಿಸಲು
ನನ್ನವಳೇ ನಿನಗೆಂದೆ
ಈ ಬಾಳು ಮೀಸಲು…!!

ರಾಜ್…!!
ಕಣ್ಣ ಬಿಟ್ಟು ಜಾರಿದ
ನೀನೆಂಬ ಕನಸು
ಅಡಗಿ ಕುಳಿತಿದೆ
ಮನದಲ್ಲಿ ನೆನಪಾಗಿ…

ಕನಸಾಗಿ ಮಧುರವಿತ್ತು
ಮಧುವಿರದ ನೆನಪೀಗ
ಕನಸ ಕಚಗುಳಿಗಿಂತ
ವಿರಹದುರಿ ಈ ನೆನಪು…

ಕೈ ಮುಗಿದು ಬೇಡುವೆನು
ಕನಸಲ್ಲಿ ನೆನಪಾಗಬೇಡ
ನೆನಪಲ್ಲೇ ಕನಸು ಸಾಕು
ಮತ್ತೆ ಮತ್ತೆ ಕಾಡಬೇಡ…

ಕಣ್ಣ ಬಿಟ್ಟು ಜಾರಿದ ಕನಸು ನೀನು
ನೆನಪಾಗಿ ಕಾಡುವ ಹಂಬಲವೇಕೆ
ನಿನ್ನ ಕನಸಿನಾಸರೆಯಲ್ಲಿ ಬದುಕುವ ಆಸೆಯಿಲ್ನ
ಮರೆಗುಳಿ ಮನಸಿಗೆ ನೆನಪಿನ ಹಂಗೇತಕೆ…!!
ಮಡುಗಟ್ಟಿದ ಮನದ ದುಗುಡ
ಕರಗಿದೆ ಕಣ್ಣೀರ ಮಳೆಯಾಗಿ
ಸಾಂತ್ವನದ ಸ್ವಾತಂತ್ರ್ಯ
ಮುದುಡಿದ ಮನಸಿಗೆ…

ಕಾಣುವ ಕನಸುಗಳೆಲ್ಲ
ಕಾಡುವ ನೆನಪುಗಳಲ್ಲ
ಗುರಿತಪ್ಪಿದ ಕನಸುಗಳೇ
ಸತ್ತು ನೆನಪಾಗಿ ಕಾಡುವವು…

ಪ್ರೀತಿ ಬಳಿ ಬಂದಾಗ
ಕಾಲಡಿಯ ಕಸದಂತೆ ಕಂಡು
ಬಯಸಿ ಬೇಕೇಂದರು ಈಗ
ಅದು ಪರರ ಸೊತ್ತು…

ಮತ್ತೆ ಚಿಗುರುವುದೇ ಪ್ರೀತಿ
ಸತ್ತ ಭಾವನೆಗಳಲಿ
ಮರೆತ ನೆನಪದು ಕೂಡ
ಸುಪ್ತ ಮನಸಿನಲಿ…

ಮನದ ದುಗುಡ ಕರಗಿ
ಹಗುರಾಗಿದೆ ಮನ
ಹಳೇ ಕೊಳೆಯು ತೊಳೆದು
ಹೊಸ ನೀರು ಹರಿದಂತೆ…!!
ಭಾವನೆಗಳ
ಮಡಿಲಲ್ಲಿ
ಜನಿಸಿದ
ಕವಿತೆ
ಭಾವನೆಗಳನ್ನೆ
ಅಳಿಸಿ
ಕಾಡಿಸಿ
ಕೊಲ್ಲುತ್ತದೆ
ತನ್ನ
ಕವಿತೆಯಲ್ಲಿ…!!
ಅವನದೆಲ್ಲವನ್ನು
ದೋಚಿದ್ದ
ಅವಳು
ಮತ್ತೇ
ಲೆಕ್ಕ
ಹಾಕುತ್ತಿದ್ದಳು
ಇನ್ಯಾರನ್ನು
ದಿವಾಳಿ
ಮಾಡುವುದು
ದೀಪಾವಳಿಗೆ
ಎಂದು...!!!
ನಿನ್ನ
ಕಂಗಳಲ್ಲಿ
ಮಿನುಗುವ

ಕೋಲ್ಮಿಂಚ
ಬೆಳಕು
ನನಗೆ
ನಿತ್ಯ
ದೀಪಾವಳಿ..!!
.....................................................................................................................
ಮತ್ತೆ
ಹತ್ತಿರವಾಗುತ್ತಿದೆ
ಕನಸು
ಕಣ್ತಪ್ಪಿ
ಹೋಗುವ
ಭಯವಿಲ್ಲ
ಕಾರಣ
ಅದೀಗ
ನನಸಾಗದ
ಹಗಲು-ಗನಸು..!!
...................................................................................................................
ಸತ್ತ
ಭಾವನೆಗಳಿಗೆ
ಮತ್ತೇ
ಜೀವ
ಬಂದಿದೆ
ನೀನಿಲ್ಲೆ
ಸುತ್ತ-ಮುತ್ತಲಿರುವ
ಸುದ್ದಿ
ತಿಳಿದು..!!

Tuesday 7 October 2014


ಒಲವೆಂಬ ಹಣತೆ
ನೀನಾಗಲಿಲ್ಲ
ಬದುಕಲ್ಲಿ ಕತ್ತಲೆಯು
ದೂರಾಗಲಿಲ್ಲ…

ಕೋಲ್ಮಿಂಚು ಬೆಳಕಂತೆ
ಮಿಂಚಿ ಮರೆಯಾದೆ
ಜಗಬೆಳಗೊ ಸೂಯ೯ನಿಗೂ
ವಿರಹದ ಕಾಟ…

ಮನೆ ಬೆಳಗೊ ಬದಲಾಗಿ
ಮನವನ್ನೇ ನೀ ದಹಿಸಿ
ನನ್ನೆದೆಯ ಬಾಂದಳದಿ
ಶಾಶ್ವತದ ಗ್ರಹಣ…

ಮೇಣದ ಬತ್ತಿಯಂತೆ
ಒಳಗೊಳಗೇ ನಾ ಕರಗಿ
ಜೊತೆಯಾದ ನೆರಳಿಗೆ
ಬೆಳಕಾಗಿ ಬದುಕಿರುವೆ…

ಒಲವೆಂಬ ಹಣತೆ
ನೀನಾಗಲಿಲ್ಲ
ನೀನಿರದೆ ಬದುಕಲ್ಲಿ
ರವಿ ಮೂಡಲಿಲ್ಲ…!!

ನೋಡು ಚಂದಿರನ
ಅಪಹರಣವಂತೆ
ಅಪರಾಧಿ ನಾನಲ್ಲ
ಅಪವಾದವೆನಗೇಕೆ…

ಯಾವ ಪ್ರೇಮಿಯ
ಪ್ರಿಯತಮೆಯ ಕಾಡಿದನೊ
ಯಾರ ಚಲುವೆಯ ಚಿತ್ತ
ಚಂಚಲಗೊಳಿಸಿದನೊ…

ನನ್ನ ಚುಕ್ಕಿಗು ಅವ
ಬಹುವಾಗಿ ಕಾಡಿದನು
ಕಾಡಿ -ಬೇಡಿ ನಾ
ನನ್ನವಳ ಬಳಿ ಸೆಳೆದೆ…

ನೋಡು ಚಂದಿರನ
ಅಪಹರಣವಂತೆ
ಯಾರವರು ಕದ್ದವರು
ಚೋರನ ಚೋರಿಯಾಗಿದೆ…

ಆಗಸದಿ ಚಂದಿರನಿಲ್ಲ
ಯಾರು ಕದ್ದರೊ ಕಾಣೆ
ಅಪರಾಧಿ ನಾನಲ್ಲ
ಅಪವಾದವೆನಗೇಕೆ…?

ರಾಜ್…!!

Saturday 20 September 2014

ನಿನ್ನ
ಬದಲಾದ
ಭಾವಕ್ಕೆ
ಮರುಗಿ
ಮನ
ಮರುಕ್ಷಣವೇ
ಹಾರಿದೆ
ದಾಸ್ಯ
ಸಂಕೋಲೆಯಿಂದ
ಬಿಡಿಸಿಕೊಂಡ
ಹಕ್ಕಿಯಂತೆ…!
___________________________________________________

ನನ್ನ
ಕನಸುಗಳಲ್ಲಿ
ನೀ
ಬಲವಂತವಾಗಿ
ನುಸುಳಿ
ಅತ್ಯಾಚಾರಗೈದ
ಭಾವನೆಗಳಿಗೆ
ಈಗ
ಮತ್ತೆ -ಮತ್ತೆ
ಬೇಕೆನ್ನುವ
ನೆನಪಿನ
ಹಂಬಲದ
ಜೊತೆಗೆ
ಮನಸ್ಸಿನ
ಬೆಂಬಲ…!!

ಮನಸಿಗೊಂದು ಸಾಂತ್ವನ

ತಿರುಗಾಡಿ ಬಾ ಮನವೇ
ತುಸು ದೂರ ಸುಮ್ಮನೆ
ಅಲ್ಲೆಲ್ಲೂ ಅವಳಿಲ್ಲ
ನೆರಳಾದರು ಸಿಗಬಹುದೇ…

ಅವಳಿಲ್ಲದ ಚಿಂತೆಯಲಿ
ನೀ ಸೊರಗಿ ಹೋಗಿರುವೆ
ಅವಳಿಗಾಗಿ ಕಾಯುತ್ತಾ
ಸುಮ್ಮನೆ ಕೊರಗಿರುವೆ…

ಅವಳಿರುವಿಕೆಯ ಭಾಸ
ನಿನ್ನ ಮೈ -ಮನದ ತುಂಬೆಲ್ಲ
ನೆನಪುಗಳಲಿ ಇಣುಕಿಣುಕಿ
ನಿನ್ನನವಳು ಕಾಡಿರಲು…

ತಿರುಗಾಡಿ ಬಾ ಮನವೇ
ತುಸು ದೂರ ಸುಮ್ಮನೆ
ನೆರಳಾದರು ಹಿಡಿದು ತಾ
ಸಿಗಬಹುದೇ ನೆಮ್ಮದಿ…!!

ರಾಜ್…!!

Wednesday 17 September 2014

" ಎಲ್ಲ ಇಲ್ಲಗಳ ನಡುವೆ"

" ಎಲ್ಲ ಇಲ್ಲಗಳ ನಡುವೆ" 

ಎಲ್ಲ ಇಲ್ಲಗಳ ನಡುವೆ
ಕಳೆದು ಹೋಗಿದ್ದೆನೆ ನಾನು
ಎತ್ತ ನೋಡಿದರು ಬರಿಯ
ಪ್ರಶ್ನೇಗಳದೆ ಕಾರು-ಬಾರು...

ಉತ್ತರವು ಇಲ್ಲಿ ತನ್ನ
ಅಸ್ತಿತ್ವವ ಹುಡುಕುತಿದೆ
ಸಮಯಕ್ಕು-ಸಮಾಧಾನಕ್ಕು
ಸಾಮರಸ್ಯದ ಕೊರತೆ...

ದಿನವೂ ಓಡುತಿದೆ
ತನ್ನದೇ ಧಾವಂತದಲಿ
ಹಿಂದೆ ಬೀಳುವೆನೆನ್ನುವ ಚಿಂತೆ
ಈ ಬದುಕಿಗು ಕಾಡುತಿದೆ...

ಸುತ್ತಮುತ್ತಲೂ ಸುತ್ತುತಿವೆ
ಬಿಕನಾಸಿ ಪ್ರಶ್ನೆಗಳು
ಬಲು ದೈನ್ಯೇಸಿ ಸ್ಥಿತಿಯಲ್ಲಿ
ಕಳೆದು ಹೋಗಿದ್ದೆನೆ ನಾನು...

ಮೈಕೊಡವಿ ಎದ್ದು ಬರುವೆ
ಇಂದಲ್ಲ ನಾಳೆ
ಎಲ್ಲ ಇಲ್ಲಗಳ ನಡುವೆ
ಉತ್ತರದ ಜೊತೆಗೆ...!!!

ರಾಜ್..!!

Tuesday 16 September 2014

ಮತ್ತೆ ಬರೆಯಬೇಕು ನಾನು
ಬಚ್ಚಿಟ್ಟ ಕನಸುಗಳು
ಗರಿ ಬಿಚ್ಚಿ ಹಾರುತಿವೆ
ಗುರಿ ಮುಟ್ಟುವ ತವಕ...

ಹಳೆ ನೆನಪುಗಳು
ಕುಕ್ಕುತಿವೆ ಹೃದಯದಲಿ
ಭಾವನೆಗಳ ಕುಗ್ಗಿಸುವಿಕೆ
ಹುನ್ನಾರದ ಸಂಚಿನಲಿ...

ಒಬ್ಬಂಟಿ ನೀನಲ್ಲ
ಕೇಳು ಹೃದಯವೆ
ನಿನ್ನಂತೆ ನೂರಾರು
ಹೃದಯಗಳಿವೆ ನೋವಿನಲಿ...

ಬದುಕು ಪ್ರೀತಿಸುವ ಕಲೆ
ಕರಗತವ ಮಾಡಿಕೊ
ಮೈಕೊಡವಿ ಎದ್ದೇಳು
ನೆನಪುಗಳ ಗುಹೆಯಿಂದ...

ಮತ್ತೆ ಬರೆಯುತ್ತೇನೆ
ನಿನ್ನ ಸಂತೈಸಲು
ಅಳಿದುಳಿದ ಬದುಕಿಗೆ
ಬಣ್ಣ ತುಂಬಿಸಲು..!!

ರಾಜ್..!!
ನನ್ನ ನಲ್ಮೆಯ ಚುಕ್ಕಿ
ಬಂಧಿಯಾಗಿದೆ ಅಲ್ಲಿ
ಚಂದಿರನ ಅಂಗಳದಿ
ಒಬ್ಬಂಟಿ ಕೂಸು…
ಚಂದಿರ ತಾ ಅಲ್ಲಿ
ಮೋಸದಿ ಮೋಹಿಸಿದ
ನನ್ನಾ ಚುಕ್ಕಿಗೆ ನಾನೀಗ
ಅಪರಿಚಿತ ಕನಸಂತೆ…
ಚಂದಿರನ ಮೋಹದಲಿ
ಸುಂದರಿಯು ಸೆರೆಯೀಗ
ನನ್ನ ಹೃದಯದ ಕೂಗು
ಅನವರತ ಅಭಿಶಾಪ…
ಚುಕ್ಕಿ ನೀನಿಲ್ಲದೆ
ಚಿತ್ತ ಚಂಚಲತೆ
ಚಿತ್ತಾರದ ಬೆಳಕೇ ಮಾಯ
ಅಮವಾಸ್ಯೆಯ ಕತ್ತಲಲಿ…!!
ರಾಜ್…!!

Wednesday 10 September 2014

ಗೆಳತಿ
ನಿನಗಿಂತ
ನಿನ್ನ
ನೆನಪುಗಳೆ
ಚೆನ್ನ
ಪ್ರತಿ
ಬಾರಿ
ಜಗಳವಾದಾಗಲು
ದೂರ
ಹೋಗದೆ
ಹಿಂತಿರುಗಿ
ಬರುತ್ತವೆ
ಮತ್ತೆ -ಮತ್ತೆ
ಕಾಡಲು…!!
@--------@@--------@@--------@@--------@@--------@@--------@
ಅವಳೆಂದರೆ
ಮುಗಿಯದ
ಕನಸು
ಕಾಡುವ
ನೆನಪು
ಮರೆಯಂದರೆ
ಮನಸಿಗೆ
ನನ್ನ
ಮೇಲೆಯೇ
ಮುನಿಸು…!!
@--------@@--------@@--------@@--------@@--------@@--------@
ಕಡಲ
ದಡದಲ್ಲಿ
ಕುಳಿತಿದ್ದೆ
ನಿನ್ನ
ನೆನಪಲ್ಲಿ
ಕಣ್ಣ ನೀರು
ಕೂಡಾ
ಕಳೆದು ಹೊಯಿತು
ಅಲೆಗಳೊಂದಿಗೆ
ನಿನ್ನ ನೆನಪಿಸಿದ
ತಪ್ಪಿಗೆ
ನನ್ನ
ಮೇಲಿನ
ಮುನಿಸಿಗೆ…!!
ನಾ
ಬರೆಯುವ
ಕವಿತೆಗಳಲ್ಲಿ
ಅವಳಿದ್ದರೆನು
ಇರದಿದ್ದರೆನು
ಬರಹ
ನನ್ನೊಳಗೆ
ನಾ
ಬರಹದೊಳಗೆ
ಬಿಡಿಸಲಾಗದ
ಬಂಧ…!!

____________________________________________________

ಮನದ
ಗಭ೯ದಲ್ಲೆಲ್ಲೊ
ಅಡಗಿ
ಕುಳಿತಿದ್ದ
ನೆನಪು
ಇಂದು
ಮತ್ತೆ
ನಿನ್ನ
ಕಂಡೊಡನೆ
ಮೆರೆಯುತ್ತಿದೆ
ಮನಸನ್ನೆ
ಗುಲಾಮನನ್ನಾಗಿಸಿ…!!
ನನ್ನದೆನ್ನುವುದು
ಏನಿಲ್ಲ
ಇಲ್ಲಿ
ನಾನೆಂಬುವುದು
ಬರಿಯ
ನೆಪ
ಮಾತ್ರ
ಮರೆತ
ನೆನಪುಗಳು
ಮುರಿದ
ಕನಸುಗಳೆರಡು
ನಿನ್ನದಲ್ಲವೆ…!!
ನೀನು
ನೀನೆಂಬ
ಅಹಮ್ಮಿನಲಿ
ನಾವು
ಎನ್ನುವುದ
ಮರೆತು
ನನ್ನನ್ನು
ನಾನಾಗಿಸಿ
ನೀ
ನಡೆದು
ಹೋದ
ದಾರಿಯ
ತುಂಬೆಲ್ಲ
ನಮ್ಮ
ನೆನಪುಗಳೇ…!!
ಅಪರಿಚಿತ ಅಲೆಮಾರಿ
ನಿನ್ನಂತೆಯೆ ನಾನು
ನಿನ್ನ ಕನಸಿಗು ಮನಸಿಗು
ಅಪರಿಚಿತ ಅಲೆಮಾರಿ...

ನೆನಪುಗಳ ಕವಲುದಾರಿ
ಕಾಲೆಳೆದು ತಂದಿದೆ
ಮರೆತಂಥ ನೆನಪುಗಳ
ಕಥೆಯನೊಂದ ಹೇಳಿದೆ...

ಕಳೆದಂಥ ಕ್ಷಣಗಳನ್ನ
ಕಾಲಚಕ್ರ ನುಂಗಿದೆ
ಕಾದು ಕುಳಿತು ಕರೆದರೂನು
ಮುನಿಸು ಕರಗಿ ಬಿಡುವುದೆ...

ಅಪರಿಮಿತ ಆಸೆಗಳು
ಪರಿಚಿತ ಭಾವಗಳಲಿ
ಸಾಂಗತ್ಯದ ಸಾಮೀಪ್ಯವು
ಗಗನ ಕುಸುಮವೇ ಸರಿ...

ಮರೆವು ಮೀರಿ ಬಂದರು
ನೆಪಕೆ ದೂರ ನಿಂತರು
ನಿನ್ನಂತೆಯೆ ಅಲೆಮಾರಿ
ಮನಸಿಗಿನ್ನು ಅಲೆದಾಟ...!!!

ರಾಜ್..!!
ಪಾವ೯ತಿಯ ಮೈಯ
ಮಣ್ಣಿನಿಂದ ಹುಟ್ಟಿಬಂದ
ಜಗದ ಒಡೆಯ ಈಶನಿಗೆ
ಸ್ವಂತಕ್ಕಾದ ಸುತನು ಈತ…

ಮಾತೃ ವಾಕ್ಯ ಪಾಲನೆಗೆ
ತಂದೆಯೊಡನೆ ಯುದ್ಧ ಮಾಡಿ
ಆನೆ ಪ್ರಾಣ ಬಲಿಯ ಕೊಟ್ಟು
ಸಾವ ಗೆದ್ದ ಧೀರ ಸುತನು…

ಇಲಿಯನೇರಿ ಜಾರಿ ಬಿದ್ದು
ನೋಡಿ ನಕ್ಕ ಚಂದಿರಂಗೆ
ಶಾಪ ಕೊಟ್ಟು ಹಿರಿಮೆ ಮೆರೆದ
ಲೋಕಮಾತೆ ಮುದ್ದು ಕಂದ…

ವಿಘ್ನಗಳ ಕೊಡದೆ ಕಾಡೊ
ಏಕದಂತದೊಡೆಯ ಸ್ವಾಮಿ
ಸವ೯ ಜನಕೆ ಶಾಂತಿ ನೀಡಿ
ಕರುಣೆಯಿಂದ ಕಾಯೋ ದೇವ…!!

(ಗಣೇಶ ಚತುರ್ಥಿ ಶುಭಾಶಯಗಳು )
ಮತ್ತದೇ ಏಕಾಂತ
ನೇಸರನಿಗೆ ಧಾವಂತ
ಇಳಿಸಂಜೆ ಇಳಿದು
ಅದೇ ಬಾನು ಅದೇ ಚಂದ್ರ...

ಕಡಲ ದಡದಲ್ಲಿ
ಭಾವಗಳ ಅಲೆ ಉಕ್ಕಿ
ಕಾವ್ಯದ ಜನನ
ಕಳೆದ ಕ್ಷಣಗಳ ನೆನೆದು...

ಮನದೊಳಗಣ ತಲ್ಲಣ
ಕಣ್ನಲ್ಲಿ ಮಳೆಯಾಗಿ
ಹರಿದೊಡೆ ಹೊರಗೆ
ಹಗುರ ಹತ್ತಿಯು ಹೃದಯ...

ಬದುಕು ಬಿತ್ತಿದ ಕನಸು
ಬಳಲಿ ಬೆಂಡಾಗಿ ಒಣಗಿ
ಮತ್ತದೇ ಏಕಾಂತ
ಮತ್ತೆ ಕಾಡುವ ನೆನಪು...!!!

ರಾಜ್..!!
ಮತ್ತೇ
ಜೀವ
ಬರುವುದೆಂದೊ
ನಾ
ಕಂಡ
ಕನಸುಗಳಿಗೆ
ಉಸಿರಾಟದ
ಕೊರತೆಯಿದೆ
ಆದರೂ
ಮನದಲ್ಲಿ
ಬತ್ತದ
ಒಲವಿನ
ಒರತೆಯಿದೆ…!!
ನನ್ನ
ಕನಸೊಂದು
ಕಣ್ಣರಳಿಸಿ
ಕಾಯುತಿದೆ
ತನ್ನ 
ಕಾಣುವ
ಮನಸಿಗಾಗಿ
ನೀ
ಮನಸು
ಮಾಡಬೇಕಷ್ಟೆ..!!
@-@-@-@-@-@-@-@-@-@-@-@-@-@-@-@-@-@-@-@-@-@
ಮನಸಿಲ್ಲದ
ಕನಸಿನಲ್ಲಿ
ಅರಸನಾಗುವ
ಬದಲು
ಮನಮೆಚ್ಚಿದ
ಮನಸಿಗೆ
ಆಳಾಗಿರುವುದೆ
ಲೇಸು..!!
@-@-@-@-@-@-@-@-@-@-@-@-@-@-@-@-@-@-@-@-@-@
ಭ್ರಮೆಯಲ್ಲಿ
ಬದುಕುವ
ಕನಸಿಗಿಂತ
ನಿನ್ನ
ನೆನಪೊಂದಿಗಿನ
ಸೆಣಸಾಡಿ
ಸಿಗುವ
ಸೋಲೆ
ಆತ್ಮ ತೃಪ್ತಿ...!!
@-@-@-@-@-@-@-@-@-@-@-@-@-@-@-@-@-@-@-@-@-@

ಹೊಂದಿಕೊ ಮನಸೆ
ಹಿಂದಿನ ನೆನಪಿಗು
ಇಂದಿನ ಕನಸಿಗೂ
ನೊಂದುಕೊಳ್ಳದಿರು ಎಂದೆಂದಿಗೂ…

ಭೂತದ ಬವಣೆಗಳು
ವಾಸ್ತವದ ಕಟುಸತ್ಯ
ಎಲ್ಲವೂ ಅತ್ಯಗತ್ಯ
ನೋಡಿರದ ನಾಳೆಯ ಮುನ್ನುಡಿಗೆ…

ಕಹಿ ನೆನಪಿಗೆ ಕುಗ್ಗದೆ
ಸಿಹಿ ಕನಸಿಗೆ ಹಿಗ್ಗದೆ
ಸಿಹಿಕಹಿಯ ಸಮ್ಮಿಲನ
ಬದುಕಾಗಲಿ -ಬೆಳಕಾಗಲಿ…

ಹೊಂದಿಕೊ ಮನಸೆ
ನೊಂದುಕೊಳ್ಳದೆ
ನೋವಿಗೂ -ನಲಿವಿಗೂ
ಹೊಂದಿಕೊಳ್ಳು ನೀ…!!
ಬೆತ್ತವೆ ಬೆದರುತಿದೆ
ಗುರಿ ಮರೆತ ಮಕ್ಕಳು
ಗುರುವೇ ಇಲ್ಲಿ ಗುಲಾಮನಯ್ಯ
ಕಾಲಚಕ್ರದ ಮಹಿಮೆ…


ದುಡ್ಡು ಕೊಟ್ಟರೆ ಪದವಿ
ವಿದ್ಯೆಯಂಬುದು ಸರಕು
ಜಾಣ ವಿಧ್ಯಾರ್ಥಿ ಕೋಣನಾಗಿ
ಕೊನೆಯ ಬೆಂಚಲೆ ಆಳುವ ಅರಸರು…

ಬೆತ್ತವೆ ಬೆದರುತಿದೆ
ಶಿಕ್ಷಕರಿಗೆ ಶಿಕ್ಷೆಯು
ಗುರು ಭಕ್ತಿ ಮರೆತಿಹರು
ಕಲಿಯುಗದ ಗುರುಕುಲವಿದು…!!
ಗುಳಿಬಿದ್ದ ಕೆನ್ನೆಗೆ
ಗುರಿಯಿರದ ನಿನ್ನೆಗೆ
ಓಲೈಸುವ ಧಾವಂತದಿ
ಮನಸೆಲ್ಲ ಮರೆಯಿತು…

ಕೆನ್ನೆಯು ಕೈ -ಕೊಟ್ಟಿತು
ನಿನ್ನೆಯು ಈ ಬದುಕೆ ಸುಟ್ಟಿತು
ಓಲೈಸುವರಾರೀಗ
ಮರಗಟ್ಟಿದ ಮನಸಿಗೆ…

ಮಾತೇ ಬೇಡ -ಮೂಕ ಭಾಷೆ
ಸಂಜ್ಞೆಯಲ್ಲೆ ನೆಮ್ಮದಿಯು
ಮನದಿ ಮನಸು ಮರೆತರೆನೆ
ನೆನಪಿಗಾಗ ಮರಣಯಾತ್ರೆ…

ಕನಸ ಕಾಡಿ ಬಂದರೂನು
ಮನದಿ ಮತ್ತೆ ನಿಂತರೂನು
ಗೆಳತಿ ನಿನ್ನ ನೆನಪೆನಗೆ
ಬದುಕು ಕೊಲ್ಲೊ ಸಂಜೀವಿನಿ…!!

Saturday 19 July 2014

ಕಾಣದ ಕಡಲೊಂದು
ಕೈ ಬೀಸಿ ಕರೆಯುತಿದೆ
ನಿನ್ನನಗಲಿ ಹೋಗಲಾರೆ
ಉಳಿಸಿಕೊ ಬಂದೆನ್ನನು…

ಆ ಬಾನ ಅಂಗಳದಿ
ಅಲೆಯುವ ಅಲೆಮಾರಿ
ನಾನಾಗಬೇಕಿಲ್ಲ ನೀನಿಲ್ಲೆ
ಇರುವಾಗ ನನ್ನದೇನಿದೆ ಅಲ್ಲಿ …

ನಿನ್ನ ಮಡಿಲೊಳಗೆ ಮಲಗಿ
ಕನಸುಗಳ ಹೆಣೆವಾಸೆ
ಈ ಭೂಮಿ ಒಡಲೊಳಗೆ
ಸೆಳೆಯಲು ಹವಣಿಸಿದೆ…

ಕಾಣದ ಕಡಲೊಂದು
ಕೈ ಬೀಸಿ ಕರೆಯುತಿದೆ
ನಿನ್ನನಗಲಿ ಹೋದರೆ
ಮತ್ತೊಂದು ಬದುಕೆಲ್ಲಿ…?

Thursday 17 July 2014

ಗೆಳತಿ
ಒಂದು
ಮಾತು ಕೇಳಿದ್ದರೆ
ಕನಸುಗಳ
ಸಿಂಗರಿಸಿ
ಹೃದಯವ
ಕೈಗಿಡುತ್ತಿದ್ದೆ
ಹೀಗೆ
ಕಣ್ಣಲ್ಲೇ
ಸಂಚು ಮಾಡಿ
ಮುಗುಳ್ನಗೆಯೊಂದಿಗೆ
ಕೊಲ್ಲುವ
ಅವಶ್ಯಕತೆ
ಏನಿತ್ತು…?
ಮತ್ತೆ ಹುಟ್ಟಿ ಬನ್ನಿ
ಸತ್ತ ಭಾವನೆಗಳೇ
ಮರೆತ ಗೆಳತಿಯ
ನೆನಪಾಗಿ ಬನ್ನಿ…

ನೆನೆಗುದಿಗೆ ಬಿದ್ದಿಹವು
ನೂರೆಂಟು ಕನಸುಗಳು
ಮನದ ಉಗ್ರಾಣದಲ್ಲಿ
ಕನಸುಗಳ ರಾಶಿ…

ಬತ್ತಿ ಹೋಗಿದೆ ಚೈತನ್ಯ
ಬದುಕುವ ಆಸೆ ಬಿಟ್ಟು
ಈ ದೇಹವೀಗ
ಬರಿ ಬೆದರುಬೊಂಬೆ…

ಮತ್ತೆ ಹುಟ್ಟಿ ಬನ್ನಿ
ಸತ್ತ ಭಾವನೆಗಳೆ
ಮರೆತ ಗೆಳತಿಯ ಮುಂದೆ
ಮತ್ತೆ ಬದುಕುವ ಬನ್ನಿ…!!

Friday 11 July 2014

ಮತ್ತೆ ಬಂದಿದೆ ಮಳೆ
ಮತ್ತೊಂದು ಮುಂಗಾರು
ಜೋತೆಯಾಗು ಬಾ ಗೆಳತಿ
ಮಳೆಯಲಿ ಜೊತೆಯಲಿ...

ಕೈ ಬಿಸಿ ಕರೆಯುತಿದೆ
ಆ ಮರವು ನಮ್ಮನ್ನು
ನೆರಳಿನಡಿ ಜೊತಯಾಗಿ
ಪ್ರೇಮದ ಕಚಗುಳಿಯಾಡಲು...

ತುಂತುರು ನೀರ ಹನಿ
ತಂಗಾಳಿ ತಂಪಾಗಿ
ನೀನಿರಲು ಸನಿಹದಲಿ
ಹಿತವಾಗಿ ಮೈ ಸೋಕಿದೆ...

ನೂರಾಸೆ ಮನದಲ್ಲಿ
ಜನಿಸಿದವು ಅರೆಘಳಿಗೆ
ಬೆಳೆಸಿ ಪೊಷಿಸುವ
ಜೊತೆಯಾಗು ಬಾ ಗೆಳತಿ...!!!
ಗೆಳತಿ
ಕನಸುಗಳನ್ನು
ಮೀಸಲಿಟ್ಟಿದೆ
ನಿನಗಾಗಿ
ತಿಳಿದಿರಲಿಲ್ಲ
ನೀನೊಂದು
ಕನಸಾಗುವಿಯಂದು
ಮೀಸಲಿಟ್ಟ
ಕನಸುಗಳೀಗ
ಹಳತು
ಕೊಳೆತು
ನೆನಪುಗಳಾಗಿ
ಬಿಟ್ಟಿವೆ…!!
ಅಲ್ಲೊಂದು
ಖಾಲಿ ಸೀಸೆ
ಶರಾಬು - ಶಾಯರಿ
ಅವನು
ಅವನೊಬ್ಬನೇ
ಮತ್ತು
ಅವಳ ಹಲವಾರು
ನೆನಪುಗಳು…!!
ಇಳಿಜಾರಿನಲ್ಲಿ
ನೀರು
ನಿಂತಂತೆ
ನನ್ನೆದೆಯ
ತುಂಬೆಲ್ಲ
ನಿನ್ನ
ನೆನಪುಗಳ
ಸಂಗ್ರಹಣೆ
ಕಾಯುತ್ತಿದ್ದೆನೆ
ಹೊಸ
ಕನಸಿನ
ಪ್ರವಾಹಕ್ಕಾಗಿ
ಹಳೇ
ನೆನಪುಗಳನ್ನು
ಪ್ರಪಾತದೆಡೆಗೆ
ಕೊಚ್ಚೊಯ್ಯಲು…!!
ಅಲೆಯುತ್ತಿದೆ ಅನಾಥವಾಗಿ
ಅಲ್ಲೊಂದು ಕವನ
ಯಾವ ಕವಿಯ ಹೃದಯದಿಂದ
ಜನಿಸಿತೊ ಕಾಣೆ…

ಚದುರಿ ಹೊಗಿವೆ ದೂರ
ಅಲ್ಲಲ್ಲಿ ಅಕ್ಷರಗಳು
ಅಕ್ಷರಗಳಲ್ಲ ಅವು
ಆ ಕವಿಯ ಭಾವನೆಗಳು…

ಯಾರು ಕಾರಣರೊ ಕಾಣೆ
ಆ ಕವಿತೆಯ ಜನನಕ್ಕೆ
ಪ್ರೀತಿಯ ಮರಣದಲಿ
ಹುಟ್ಟಿತೊಂದು ಕವನ…

ಭಾವನೆಗಳ ಮೌನಕ್ಕೆ
ಹೃದಯದ ನೋವದು
ಅಕ್ಷರಗಳ ರೂಪದಲಿ
ಕವಿತೆಯಾಗಿ ಸಾಂತ್ವನ…

ಬತ್ತಿಹೊಗಿವೆ ಕನಸುಗಳು
ಪ್ರೀತಿಯ ನಿರೀಕ್ಷೆಯಲ್ಲಿ
ಕಾದಿರುವ ಕಣ್ಣೊಟಗಳು
ಅನಾಥವಾಗಿದೆ ಕವನ…!!
ಬಾರದಿರು ಕಣ್ಣೆದುರು
ಮರೆತ ಹೃದಯವಿದು
ಬಂದರೆ ಮತ್ತೊಮ್ಮೆ
ಮತ್ತದೆ ರೋಮಾಂಚನ...

ಮಾತಿಲ್ಲದಿದ್ದರೂ
ಮೌನವು ಪ್ರೀತಿಯೆ
ನೀ ಒಲಿಯದಿದ್ದರು
ಅತೀ ಒಲವು ಎನಗೆ...

ಅಂದೆಂದೊ ಮರೆತಿದ್ದೆ
ಮತ್ತೇ ನೀ ಎದುರಾದೆ
ನಿನ್ನಿರುವಿಕೆ ಅರಿತೊಡನೆ
ಹೃದಯದೊಳು ಕಂಪನ...

ಮನಸಿನಾಳದೊಳಗೆಲ್ಲೊ
ಅವಿತ ನೆನಪುಗಳು
ಮೈಕೊಡವಿ ಏಳುತ್ತಿವೆ
ಹೊಸತೊಂದು ತಲ್ಲಣ...

ಬಾರದಿರು ಗೆಳತಿ
ಮರೆತ ಹೃದಯವಿದು
ಮಾಗಿದ ಗಾಯಕ್ಕೆ
ಕೆರೆದು ಹುಣ್ಣಾಗದಿರು...!!!
ಅವಳ
ಗುಳಿ
ಬಿಳುವ
ಕೆನ್ನೆಯಿಂದಲೆ
ನನ್ನೆದೆಯಲ್ಲಿ
ಉಳಿ
ಪೆಟ್ಟು
ಬಿದ್ದು
ನೆನಪಿನ
ಕಂದಕ
ನಿಮಾ೯ಣಗೊಂಡದ್ದು…!!
ಬನ್ನಿ
ನೆನಪುಗಳೆ
ಸಾಕಿನ್ನು
ಬೆತ್ತಲಾಗಿದ್ದು
ಹಿಂತಿರುಗಿ
ಬಂದು
ಮನದ
ಗೂಡು
ಸೇರಿ
ಕನಸುಗಳು
ಬರುವ
ಹೊತ್ತಾಯಿತು
ಮನಸು
ಹುಚ್ಚು
ಭ್ರಮೆಯಲ್ಲಿ
ಅರಳುವ
ಸಮಯ…!!
ಒಂದೇ
ಸಮನೆ
ಮುಂದೊಡುತಿದೆ
ಬದುಕು
ಆದರೂ
ನಿನ್ನ
ನೆನಪಲ್ಲೇ
ಸಿಲುಕಿ
ಸಾಯುತ್ತಿರುವ
ನಾನೊಬ್ಬ
ಹಿಂದುಳಿದ
ಜೀವಿ…!!
ಈಗಲೂ ಕೇಳುತ್ತಿದೆ
ಅವಳ ಕಾಲ್ಗೆಜ್ಜೆಗಳ
ನಿನಾದ…

ತನ್ನೆಡೆಗೆ ಸೆಳೆಯುತ್ತಿದೆ
ಮುಡಿದ ಮಲ್ಲಿಗೆಯ
ಕಂಪು…

ಕಣ್ರೆಪ್ಪೆ ತುದಿಯಲ್ಲಿ
ಕೂಡಿಟ್ಟ
ಕನಸುಗಳು…

ಬಳಿಯಲ್ಲಿ ಅವಳಿಲ್ಲ
ಬರಿ ಅವಳ
ನೆನಪುಗಳೆ…

ನನ್ನೊಳಗೆ ನಾ
ಹೇಳಿಕೊಂಡ
ಹೇಳದ ಮಾತುಗಳು…

ಕಿಸೆಯಲ್ಲಿ ಇನ್ನು ಭದ್ರ
ಅಂದು ನಾ ಬರೆದ
ಒಲವಿನ ಪತ್ರ…!!
ನಿನ್ನ
ನೆನಪುಗಳೆಲ್ಲ
ಆವಿಯಾಗಿವೆ
ಮತ್ತೆ
ಕನಸಿನ
ಮಳೆಯಾಗುವ
ಸಂಭವ…!!
ನನ್ನೆದೆಯ
ಆಳದಲ್ಲಿ
ಅವಳೆಡೆಗೆ
ಉಕ್ಕಿ
ಹರಿಯುತ್ತಿದ್ದ
ಪ್ರೀತಿಯ
ಭಾವನೆಗಳಿಗೆ
ಸ್ನೇಹದ
ತಡೆಗೋಡೆ
ಕಟ್ಟಿ
ಬದುಕು
ಬರಡಾಗಿಸಿದ
ಅವಳೊಂದು
ಭಾವ (ನಾ) ಜೀವಿ…!!
ಒಲವೆಂಬ ಕನಸದು
ಛಲಬಿಡದೆ ಕಾಡುತಿದೆ
ಮನಸಿನ ಅಂಗಳದಲ್ಲಿ
ನಿನ್ನ ನೆನಪಿನ ರಂಗೋಲಿ…

ಕಪ್ಪು - ಬಿಳುಪಿನ ನಯನ
ಕನಸು ಕಾಮನಬಿಲ್ಲು
ಬಿಸಿಲ ಬೆಳದಿಂಗಳಲ್ಲಿ
ಅವಳೊಂದು ಚಂದಿರನ ತುಂಡು…

ಪ್ರೀತಿಗೂ ಉಂಟು ಗ್ರಹಣ
ಹಣದ ಮುಂದೆ ಎಲ್ಲವೂ ಗೌಣ
ಇಂದು ನೀನು - ನಾಳೆ ಇನ್ನಾರೋ
ಬದುಕಲ್ಲಿ ಬದುಕೇ ಪಗಡೆಯಾಟ…

ಒಲವೆಂಬ ಕನಸು
ಛಲಬಿಡದೆ ಕಾಡುತಿದೆ
ಮನದ ಅಂಗಳದಲ್ಲಿಗ
ನಿನ್ನ ನೆನಪಿನ ರಂಗೋಲಿ…!!
ನೀನಿಲ್ಲದೇ ಈ ದಿನ
ಕಳೆದು ಹೋದೆನು ನಾ
ನಿನ್ನನಲ್ಲದೆ ಬೇರೆನು
ಬಯಸದು ಈ ಮನ…

ತನು ನಿನ್ನದು ಮನ ನಿನ್ನದು
ನಾ ಕಾಣೊ ಕನಸದು
ಉಸಿರಾಡೊ ಪ್ರತಿ ಗಾಳಿ
ನಿನ್ನ ಹೆಸರಿಗೆ ನನ್ನ ಉಸಿರಿದು…

ನೀ ಬಂದರು - ಬರದಿದ್ದರೂ
ಕಾಯುವೆ ಸುಮ್ಮನೇ
ನೀ ನೊಂದರು ನನ ಕೊಂದರು
ಸಾಯುವೆ ಸುಮ್ಮನೇ…

ನೂರು ಜನ್ಮಕು -ನೂರಾರು ಜನ್ಮಕು
ಕಾಯುವೆನು ನಿನಗಾಗಿ
ಹೊಸ ಹೆಸರಿನೊಂದಿಗೆ
ಹಳೇ ಉಸಿರಿನೊಂದಿಗೆ…

ನೀನಿಲ್ಲದೇ ಈ ದಿನ
ಕಳೆದು ಹೋದೆ ನಾ
ನಿನ್ನ ನೆನಪೊಂದಿಗೆ
ಉಸಿರಾಡುತಿದೆ ಮನ…!!

ನೀ
ಕೊಟ್ಟ
ಕಣ್ಣೀರ
ಹನಿಯಿಂದಲೆ
ಅಕ್ಷರಗಳ
ರೂಪದಲ್ಲಿ
ಹುಟ್ಟಿಕೊಂಡ
ಉಡುಗೊರೆ
ನನ್ನ

ಹನಿ ಗವನ…!!
ಪ್ರೀತಿಯ
ಹೂ
ಅರಳಿ
ಕಂಪು
ಸೂಸುವ
ಮುನ್ನ
ಚಿವುಟಿ
ಹಾಕಿದ
ನಲ್ಲೇ
ಇಟ್ಟು
ಹೊಗಿದ್ದಾಳೆ
ಗೋರಿಯ
ಮೇಲಿಂದು
ಅರಳಿದ
ಕೆಂಪು ಗುಲಾಬಿ…!
ಬದುಕೊಂದು ಚಿಂತೆಯೊ
ಬದುಕಲ್ಲಿ ಚಿಂತೆಯೊ
ಬರುವುದು ಅದು ತಾ
ಚಿತೆವರೆಗೂ ಜೊತೆಯಾಗಿ…

ನಿತ್ಯದ ಬದುಕಿನಲಿ
ನಗುವಿನ ಮುಖವಾಡ
ಹಿಂದೆಯೇ ಅವಿತಿರುವ
ಚಿಂತೆಯ ಕರಿ ಮೋಡ…

ಚಂಚಲ ಮನಸಿಗೆ
ಚಿಂತೆಯೇ ಹಸುಗೂಸು
ಚಿಂತೆಗು - ಬದುಕಿಗೂ
ನಂಟೊಂದು ಅಂಟಿಹುದು…

ಸಂತಸದ ಜೊತೆ ಜೊತೆಗೆ
ಚಿಂತೆಯು ಬಳುವಳಿ
ಸಂತನಾದರು ತಪ್ಪದು
ಚಿಂತೆಗಳ ಹಾವಳಿ…

ಬದುಕಲ್ಲಿ ಚಿಂತೆಯೊ
ಈ ಬದುಕೆ ಚಿಂತೆಯೊ
ಚಿಂತೆಗಳ ಸಂತೆಯಲಿ
ನೆಮ್ಮದಿಯ ಹುಡುಕಾಟ…!!

—a
ಬದುಕಲ್ಲಿ
ಬದುಕನ್ನು
ಕೊಟ್ಟ
ತಾಯಿಯ
ಮರೆತ
ಕೆಲವು
ಮಕ್ಕಳು
ಮಾಡುವರು
ಮದರ್ -ಡೇ
ಮನೆ
ಅಳಿಯರಾಗಿ
ಮದರ್ -ಇನ್ -ಲಾ
ಗಾಗಿ…!!
ನಿನ್ನ
ಕನವರಿಕೆಯಲ್ಲೆ
ಹುಟ್ಟಿ
ಬೆಳೆದ
ಕನಸೊಂದು
ಕಾಣೆಯಾಗಿದೆ
ಹುಡುಕುವ
ಮನಸಾಗುತ್ತಿಲ್ಲ
ಕನಸದು
ಮರೆಯಲಾಗುತ್ತಿಲ್ಲ
ಅಂತರಂಗದಲ್ಲಿ
ಭಾವನೆಗಳ
ದೊಂಬರಾಟ…!!
ಗೆಳತಿ
ನಿನಗೆಂದೆ
ಮೀಸಲಿಟ್ಟ
ಕನಸುಗಳು
ಮೈಲಿಗೆಯಾಗುತ್ತಿವೆ
ನೀ
ಬರುವ
ಮುನ್ನವೆ

ಹುಡುಗಿಯರ
ಹಾವಳಿಯಿಂದ.....!!!

Tuesday 6 May 2014

ಆನೆಯಷ್ಟು
ದೊಡ್ಡ
ಆಣೆ
ಪ್ರಮಾಣಗಳನ್ನು
ಮಾಡಿ
ಕಾಣೆಯಾದಳು
ಹುಡುಗಿ
ತಂಗಾಳಿ
ಸೋಕದಂತೆ…!
ನೀ ಬಿಟ್ಟು ಹೊದ ದಾರಿಯಲ್ಲಿ
ಒಬ್ಬಂಟಿ ಕನಸು ಒಂದು
ನನಸಾಗದ ತನ್ನತನಕೆ
ಕಂಬನಿಯಗರೆಯುತಿದೆ…

ಕೂಡಿ ಕಳೆದ ಕ್ಷಣಗಳಲ್ಲಿ
ಇರದ ಭೀತಿ ನೆರಳೊಂದು
ಸುಳಿವು ಕೊಡದೆ ದಾಳಿ ಮಾಡಿ
ಮನಸ ಘಾಸಿಗೊಳಿಸಿದೆ…

ಗುಲಾಬಿಯಂತೆ ನಳನಳಿಸುತ್ತಿದ್ದ
ಹೂವು ನೀನು ದುಂಬಿ ನಾನು
ಮಾಲಿ ಯಾರೊ ಬಂದನವನು
ಬೆಲೆಯ ಕಟ್ಟಿ ಕೊಂಡುಹೊದ…

ಹೃದಯ ಕಿತ್ತು ಹೊದ ಭಾವ
ನೆನಪು ಹೊತ್ತ ಎದೆಯ ತುಂಬಾ
ವಿರಹದುರಿಯು ಭಾರ ಭಾರ
ಜೊತೆಗೆ ಆಸರೆ ಕಣ್ಣ ನೀರ…

ನೀ ಬಿಟ್ಟು ಹೊದ ದಾರಿಯಲ್ಲಿ
ಒಂಟಿಯಾದ ಕನಸು ಒಂದು
ತನ್ನತನಕೆ ಹಳಿಯುತಿದೆ
ಒಂದೆ ಸಮನೆ ಕೊರಗುತಿದೆ…!!

ರಾಜ್…!!

ಕನಸಿನ
ಅರಮನೆಯಲ್ಲಿ
ಜೊರಾದ
ಕಂಪನ
ಸಂತಸದಿ
ಹೊರಟಿದೆ
ಅವಳ
ಮದುವೆ
ದಿಬ್ಬಣ…
……!……!……!……!……!……!……
ಕಾಡುವ
ಕನಸಿಗೂ
ಕನಿಕರದ
ಕೊರತೆ
……!……!……!……!……!……!……
ಅವಳ
ನೆನೆಯಲು
ಪುಟಿದೇಳುವ
ನೋವಿನ
ಸೆಲೆ
ಅಳುವ
ಕಣ್ಣಿಗೆ
ಕಣ್ಣೀರು
ಬತ್ತುವ
ಆತಂಕ
……!……!……!……!……!……!……
ಮಡಿವಂತಿಕೆ ಸೋಗಿನಲಿ
ಮಯಾ೯ದಾ ಪುರುಷರು
ಹಗಲೊತ್ತಿನಲಿ ಮುಖವಾಡ
ಸಂಜೆ ಕತ್ತಲಿನಲಿ ಬೆತ್ತಲೆ ಸಹವಾಸ…

ಮದಿರೆಯ ನಶೆಯಲ್ಲಿ
ಕೆಂಪು ದೀಪದ ಓಣಿ
ಕಚ್ಚೆ ಹರುಕರ ದಂಡು
ಕೊಚ್ಚೆ ತುಂಬಿದ ದೋಣಿ…

ಹೆಣ್ಣನಿವರು ಪೂಜಿಸುವರು
ತಮ್ಮ ಮನೆಯ ಬಂಧಿಯೊಳಗೆ
ಅನ್ಯರೆಲ್ಲ ಅನಾಮಿಕರು
ಅನುಭವಕೆ ಇವರು ಮಿಕರು…

ಹೆಣ್ಣಿಗಷ್ಟೆ ಕಟ್ಟುಪಾಡು
ಕೇಳೊರಿಲ್ಲ ಹೊಟ್ಟೆಪಾಡು
ಸುತ್ತ ಮುತ್ತ ಗೋಡೆ ಕಟ್ಟಿ
ಕರೆಯಲೊಂದು ಸೂಳೆ ಪಟ್ಟ…

ಮಡಿವಂತಿಕೆ ಸೋಗಿನಲಿ
ಮಯಾ೯ದಾ ಪುರುಷರು
ಹಗಲೊತ್ತಿನಲಿ ಮುಖವಾಡ
ಸಂಜೆ ಕತ್ತಲಿನಲಿ ಬೆತ್ತಲೆ ಸಹವಾಸ…!!

ಗೆಳತಿ
ಕಣ್ಮುಚ್ಚಿ
ಮಲಗದಿರು
ಬೇಗ
ಕನಸುಗಳ
ಕೊಂದು
ಯಾವುದಾದರೂ
ಒಂದು
ಕನಸಿನಲಿ
ಜನ್ಮ
ತಳೆಯುವ
ಆಸೆ
ನನಗೆ…!!

“ನಮ್ನ ಚಿತ್ರ -ನಿಮ್ಮ ಕವನ… ಸರಣಿ -4ಕ್ಕೆ ನನ್ನ ಪ್ರಯತ್ನ ”

ಜಗದ ಚಿಂತೆಯಲಿ
ಮುಳುಗಿಹುದು ಶ್ವಾನ
ಮಾನವನ ಸ್ವಾಥ೯ಕ್ಕೆ
ಹಳಿದಿಹುದು ಒಳಗೊಳಗೇ…

ಕಾಗೆ -ಗೂಬೆಗಳಿಗಿಂತ
ಕೀಳಾಗಿ ಹೊಗಿಹನು
ನಾನು ನನ್ನದೇನ್ನುವ
ಮೋಹದ ಪರಿಧಿಯೊಳಗೆ …

ಹಂಚಿಕೊಂಡು ತಿನ್ನುವ
ಬದಲಾಗಿ ಕಸಿದು ತಿನ್ನುತ್ತ
ಬರಿ ಸುಲಿಗೆ ಮಾಡುತಿಹ
ಮೃಗಕ್ಕಿಂತ ಕಡೆಯಾಗಿ…

ನನಗಿರುವ ನಿಯತ್ತು
ನಿಮಗಿರದೆ ಹೊಯ್ತು
ಎಂದೆನುತ ಶ್ವಾನವು
ನಿದಿರೆಯ ಮೊರೆಹೊಯ್ತು…!!
ಕನಸೆಂದರೆ ಬರಿ
ಕನಸಲ್ಲ ಅದು
ಮನಸಿನ ಭಾವನೆಗೆ
ಹಿಡಿದ ಕನ್ನಡಿಯ ಬಿಂಬ…

ಕನಸೆಂದರೆ ಬರಿ
ತಂಪಾಗಿ ಬೀಸುವ
ತಂಗಾಳಿಯಲ್ಲ ಅದು
ಅಮವಾಸೆಯ ಕತ್ತಲೂ…

ಕನಸೆಂದರೆ ಬರಿ
ಬೆಳಗಿನ ಇಬ್ಬನಿಯ
ಪಸೆ ಅಲ್ಲ ಅದು
ಸುಡು ಬಿಸಿಲಿನ ಬೆವರ ಹನಿ…

ಕನಸೆಂದರೆ ಬರಿ
ಸಂತಸದ ಕ್ಷಣವಲ್ಲ
ಸಂತಸದ ಜೊತೆ ಬರುವ
ಚಿಂತೆಯ ಗೆರೆ ಕೂಡ…

ಕನಸೆಂದರೆ ಅದು ಕನಸು
ಏಳು ಬೀಳನು ಕಂಡ
ಸಿಹಿ -ಕಹಿಯ ಸವಿಯನ್ನುಂಡ
ಮನಸಿನ ಭಾವಸಂಗಮ…!!

ರಾಜ್…!!

ಕಾಡು ಬೆಳದಿಂಗಳ
ಸರಿ ರಾತ್ರಿ ಹೊತ್ತಲ್ಲಿ
ಚಂದ್ರನ ಬೆಳಕಿನ
ಆಸರೆ ಬಯಸುತಲಿ…

ಹೃದಯ ಹೊರಟಿದೆ
ದೂರ ತೀರಕೆ ಪಯಣ
ಹಿಂದೆಂದೋ ಕಂಡಂತ
ಕನಸಿನ ಜಾಡು ಹಿಡಿದು…

ವಾಸ್ತವವ ಮರೆಮಾಚಿ
ಕನಸನ್ನು ಹುಡುಕುತ್ತ
ಹಠ ಹಿಡಿದ ಹೃದಯ
ಗುಳೆ ಹೊರಟಿದೆ ಇಂದು…

ಹೊಗುವ ಭರದಲ್ಲಿ
ಮರೆತಿದೆ ತಾನಿಂದು
ಜೀವನದ ಹಾದಿಯಲಿ
ಕಲ್ಲು ಮುಳ್ಳುಗಳುಂಟೆಂದು…

ಬಯಸಿದ್ದೆಲ್ಲವು ಸಿಗದು
ಬಾಳಲ್ಲಿ ಎಂದೆಂದೂ
ಇದ ಮರೆತ ಹೃದಯ
ಅರಿಯುವುದು ಇನ್ನೆಂದು…!!
ಮನಸಿನ ಬಯಲೊಳಗೆ
ಭಾವನೆಗಳ ಬಯಲಾಟ
ಮನಸಿನ ಒಡೆಯನಿಗೆ
ಸಹಿಸದ ತೊಳಲಾಟ…

ಒಂದೊಂದು ಭಾವಕ್ಕೂ
ಒಂದೊಂದು ರೂಪ
ಆಡುವವು ಚೆಲ್ಲಾಟ
ಮನಸೊಳಗೆ ಸಂಕಟ…

ಭಾವಜೀವಿಯ ಮನಸು
ಜೊತೆಗೆ ನನಸಾಗದ ಕನಸು
ಬದುಕಿರುವ ತನಕವು
ಭ್ರಮೆಯೊಳಗೆ ಬದುಕು…

ಮನಸಿನ ಬಯಲೊಳಗೆ
ಭಾವನೆಗಳ ಬಯಲಾಟ
ಭಾವಗಳ ಬಂಧನದಿ
ನಿತ್ಯವು ನರಳಾಟ…!!

ರಾಜ್…!!
ನೀ
ಬಿಟ್ಟು
ಹೊದ
ಹೆಜ್ಜೆ
ಗುರುತುಗಳಲ್ಲಿ
ಗೆಜ್ಜೆ
ಸದ್ದಿನ
ಕಂಪನ
ಕೇಳುವ
ಹುಂಬ
ಬಯಕೆ

ಲಜ್ಜೆ
ಬಿಟ್ಟ
ಮನಸ್ಸಿಗೆ…!!

Thursday 10 April 2014

ನಿನಗಾಗಿ ಕೂಡಿಟ್ಟ
ಹತ್ತಾರು ಕನಸುಗಳು
ನಿನಗದರ ಅರಿವಿಲ್ಲ
ನೀ ಬರುವ ಸುಳಿವಿಲ್ಲ...

ಇಂದುಗಳು ಕಳೆದು
ನಿನ್ನೆಗಳಾದ ದಿನಗಳೆಷ್ಟೊ
ಬರುತಿರುವ ನಾಳೆಗಳು
ಉಳಿದಿರುವ ಸಮಯವೆಷ್ಟೊ...

ಕಾಮನ ಬಿಲ್ಲದು ಕರಗುವಾಗ
ಕಲ್ಲಾದ ಹೃದಯ ನೀ ಕರಗದಾದೆ
ಕಣ್ಣಂಚಿನಲ್ಲಿ ಕಣ್ಣೀರ ಕೋಡಿ
ಮನದ ಮೂಲೆಯಲ್ಲಿತ್ತು ಭರವಸೆಯ ಸಿಂಚನ...

ನೀ ತೊರೆದ ಆ ಘಳಿಗೆ
ಹಿಡಿದಿದೆ ನೆನಪುಗಳಿಗೆ ಗ್ರಹಣ
ನನ್ನುಸಿರ ಕಣ-ಕಣವು
ಬಿಡುತಿದೆ ನಿನ್ಹೆಸರಿಗೆ ತರ್ಪಣ...

ನಿನಗಾಗಿ ಕೂಡಿಟ್ಟ
ಹತ್ತಾರು ಕನಸುಗಳು
ಈಗ ಮನಸಿನಂಗಳದಲಿ
ಗೋರಿಯೊಳಗಿನ ಶವಗಳು...!!

ರಾಜ್...!!
ಮಗನ
ಒಳಿತಿಗಾಗಿ
ತನ್ನೆಲ್ಲ
ಕನಸುಗಳ
ಬಲಿ ಕೊಟ್ಟ
ಹೆತ್ತಬ್ಬೆ…

ತನ್ನ
ಕನಸುಗಳಿಗಾಗಿ
ಹೆತ್ತಬ್ಬೆಯ
ಕಡೆಗಣಿಸಿದ
ಮಗರಾಯ…

ತಾಯಿಯ
ತ್ಯಾಗಕ್ಕೆ
ಸ್ವಾಥ೯ದ
ಪ್ರತಿಫಲ…

ಮಗನಿಗೊ
ಪ್ರೀತಿ -ವಾತ್ಸಲ್ಯವು
ಗೌಣ
ಹಣ ಗಳಿಸುವ
ಹಂಬಲ…!!
ಗೆಳತಿ…!!

ಅರಿಯದ ಬಾಲ್ಯದಲ್ಲಿ
ಜೊತೆಯಾದ ಒಡನಾಡಿ
ಸ್ನೇಹಕ್ಕೆ ಬೆಸೆದ
ಹೊಸತೊಂದು ಕೊಂಡಿ…

ಹರೆಯದ ಹೊಸ್ತಿಲಲಿ
ಸರಿ ತಪ್ಪುಗಳ ತಿದ್ದಿ ತಿಡಿ
ಕಷ್ಟದಲಿ ಸಹಕರಿಸಿ
ಗೆಲುವಿನಲಿ ಸಂಭ್ರಮಿಸಿ…

ಸುಖ -ದುಃಖಗಳಲ್ಲಿ
ಸಮನಾಗಿ ಸಹಭಾಗಿ
ಭಾವನೆಗಳ ಭಾಷೆ ಅರಿತ
ಅವಳೊಂದು ಭಾವ ಜೀವಿ…

ವ್ಯಕ್ತಿಗತ ಬದುಕಿನಲಿ
ಸಮಯ ಸಾಧಕರೊಳಗೆ
ಗೆಳೆತನಕೆ ಸ್ಪಂದಿಸುವ
ಹೃದಯ ವೈಶಾಲ್ಯತೆ…

ಜೀವನದ ದಾರಿಯಲಿ
ಜೊತೆಗಿರುವ ನೆರಳಂತೆ
ಸ್ನೇಹದ ಬಾಂಧವ್ಯಕೆ
ಬೆಲೆ ಕಟ್ಟದ ಅಪರಂಜಿ…!!

ರಾಜ್~! —
ಮನದೊಳಗಿನ
ಮೌನಕ್ಕೆ
ಮಾತು ಬರುತಿದೆ...

ಮೌನ ಮನದ
ನೋವನಿಂದು
ಹಂಚ ಬಯಸಿದೆ...

ಮನದ ನೋವ
ತಿಳಿಯಲೊಂದು
ಮನಸು ಬೇಕಿದೆ...

ನೋವ
ಹಂಚಿಕೊಂಡು
ಹಗುರವಾಗ ಬಯಸಿದೆ...

ನಾನು
ನನ್ನದೆನ್ನುವ
ಒತ್ತಡದೊಳಗೆ...

ಮನದ ನೋವ
ಅರಿಯಲೊಂದು
ಮನಸು ಸಿಗುವುದೆ..?

ರಾಜ್...!!
ಕಾರಣವಿಲ್ಲದೆ
ಕಾಡಿದೆ ನೀನು
ನಿನ್ನಯ ಮುನಿಸಿಗೆ
ಕಾರಣವೇನು..

ಹೇಳದೆ ಉಳಿದ
ಮಾತುಗಳೆಷ್ಟೊ
ಉತ್ತರ ಸಿಗದ
ಪ್ರಶ್ನೆಗಳೆಷ್ಟೊ...

ಮೌನವು ತಾಳಿದೆ
ಮನವಿಂದೆಕೊ
ಮಾತಿನ ಮೇಲೆ
ಬೇಸರವೇಕೊ...

ಮಾಡದ ತಪ್ಪಿಗೆ
ಶಿಕ್ಷೆಯು ತರವೆ
ಕರುಣೆಯ ಭಾವ
ನಿನಗಿಲ್ಲವೆ..?

ಕಾರಣವಿಲ್ಲದೆ
ಕಾಡುವೆ ಏನು
ಗೆಳೆಯನೆ ಹೇಳು
ನಿನ್ನಯ ಮುನಿಸಿಗೆ
ಕಾರಣವೇನು..!!
ಉರುಳುತಿದೆ ಜೀವನಚಕ್ರ
ಕಾಲಚಕ್ರದ ಜೊತೆ ಸೇರಿ
ಬದುಕಿನ ಬಂಡಿಯಲಿ
ನೀನಿರದೆ ಜೊತೆಯಲ್ಲಿ...

ಪಾಳು ಬಿದ್ದ ಕೊಂಪೆ
ಈಗ ಕನಸಿನಾರಮನೆ
ನೀ ತೊರೆದ ಘಳಿಗೆಯಲಿ
ಬಾಳ ಪಯಣದಲಿ...

ಮುಸ್ಸಂಜೆ ವೇಳೆಲಿ
ಒಬ್ಬಂಟಿ ಭಾವ
ಕೆಣಕುವವು ನೆನಪುಗಳು
ಮನದಿ ಮರೆಯದ ತಲ್ಲಣ...

ಉರುಳುವುದು ಜೀವನ ಚಕ್ರ
ನೀನಿದ್ದರು ಇರದಿದ್ದರೂ
ಕಾಲಚಕ್ರದ ಜೊತೆ ಸೇರಿ
ಕಾಲನ ಕರೆ ಬರುವವರೆಗೆ..!!

Monday 17 March 2014

ಕನಸ ಕದಿಯುವ ಮುನ್ನ
ಕರೆಯೊಂದ ಮಾಡು
ಒಟ್ಟಾರೆ ಕನಸುಗಳ
ಕೂಡಿಡುವೆ ಕಣ್ಣಿನಲಿ…

ಕನಸು ಕದಡಿದೆ
ಮನಸು ಮಿಡಿದಿದೆ
ಕಾರಣವ ತಿಳಿಯದು
ನೆನಪೊಂದು ಕಾಡುತಿದೆ…

ಮನದ ಕೊಳದಲ್ಲಿಗ
ಸಹಿಸದ ಬಿರುಗಾಳಿ
ಜೊರಾಗಿ ಚಲಿಸುತಿವೆ
ನಿನ್ನ ನೆನಪಿನ ಅಲೆಗಳು…

ಮನಸು ಕದಿಯುವ ಮುನ್ನ
ಮರೆಯದೆ ಕರೆ ಮಾಡು
ಮನದ ಬಾಗಿಲನು ಸಿಂಗರಿಸಿ ಬಿಡುವೆ
ಓ ನನ್ನ ಮನದಾಳದ ಅತಿಥಿ…!!
ಬಾರದಿರು ಕನಸೆ
ಮತ್ತೊಮ್ಮೆ ನೆನಪಿನಲಿ
ಮಲಗಿರುವ ನೆನಪುಗಳು
ಎದ್ದಾವು ಕನಸಿನಲಿ…

ಬಿಕ್ಕಳಿಸಿ ಬಿಕ್ಕಳಿಸಿ
ರೋಧಿಸಿದೆ ಈ ಮನವು
ಕಾಡುತಿದೆ ಕರಿನೆರಳು
ಬೆಂಬಿಡದೆ ಹಗಲಿರುಳು…

ಮರೆತಂತೆ ನಟಿಸಿದರು
ಕನಸಿನಲಿ ಕಾಡುವವು
ಮರೆಯಲೆತ್ನಿಸಿದಷ್ಟು ನೆನಪುಗಳು
ಮರುಕಳಿಸಿ ಕೊಲ್ಲುವವು…

ಮನದ ಮೈದಾನದಲ್ಲಿಗ
ನೆನಪುಗಳ ಕದನ
ಹೃದಯದ ಆಕ್ರಂದನಕೆ
ಕನಸುಗಳು ಕಾರಣ…

ಬಾರದಿರು ಕನಸೆ
ಮತ್ತೊಮ್ಮೆ ನೆನಪಿನಲಿ
ಮಲಗಿರುವ ನೆನಪುಗಳು
ಎದ್ದಾವು ಕನಸಿನಲಿ…!!

ರಾಜ್…!!
ನನ್ನವಳ
ಕಾಂತಿಗೆ

ಸೂಯ೯ಕಾಂತಿಯು
ನಾಚಿ
ತಲೆ ಬಾಗಿಸಿತು…!!
............................................

ಅವಳು
ನಕ್ಕಾಗ
ಉದುರಿಬಿದ್ದ
ಮುತ್ತುಗಳು
ಸಾಗರದ
ತಳ ಸೇರಿ
ಕಪ್ಪೆ - ಚಿಪ್ಪುಗಳಾದವು…!!
....... ‌...............................

ಅವಳಂದಕೆ
ಮನಸೋತ
ಚಂದಿರ
ಇಂದಿಗೂ
ಅವಿವಾಹಿತ…!!
.………………………………………
ಹೆಪ್ಪುಗಟ್ಟಿದೆ ಮೌನ
ಸಹನೆಯು ಮಿತಿಮೀರಿ
ಮಾತನಾಡ ಬಯಸಿದೆ…

ಮುಗ್ದ ಮನಸಿಗೆ
ಮುನಿಸಿನಿಂದ ಶಿಕ್ಷೆ
ತರವೇ? ನೀ ಹೇಳೆ…

ಅಂಕದ ಪರದೆ
ಸರಿಯುವ ಮುನ್ನ
ಬಿಂಕವ ತೊರೆದು…

ಮೌನ ಮಾತಾಡುತಿದೆ
ಓ ಒಲವೆ ಕಿವಿಗೊಟ್ಟು
ಕೇಳು ನೀನೊಮ್ಮೆ…!!

ರಾಜ್…!!.
ಅಲೆಗಳ
ಹೊಡೆತಕ್ಕೆ
ಕಡಲ
ಕೊರೆತಕ್ಕೆ
ಕಲ್ಲು
ಕೂಡಾ
ಕರಗುವುದಂತೆ
ಆದರೆ
ನನ್ನವಳ
ಹೃದಯ
ತುಂಬಾ
ಗಟ್ಟಿ…!!
ಅಳಿವಿನಂಚಿಗೆ ಬಂದು ನಿಂತಿದೆ
ಅಗಲಿಕೆ ನೋವಿನಲಿ
ನರಳಿ ನೊಂದಿದೆ
ಈ ಹೃದಯ…

ಅಲ್ಪ -ಸ್ವಲ್ಪ ವೆ
ಉಸಿರಾಡುತಿದೆ
ಅನಪಭವಿಸುತಿದೆ
ನರಕಯಾತನೆ ಸಮಯ…

ಚಂದಿರನು ಮರುಗಿಹನು
ಸಂಸೈಸಿ ಸೋತಿಹನು
ಅವಗಿಲ್ಲದ ನೋವು
ನಿನಗೇತಕೆಂದು ಕೇಳಿಹನು…

ಮಸಣದ ಹಾದಿಯಲಿ
ಕನಸುಗಳ ಮಾರಣಹೊಮ
ನೆನಪುಗಳು ನಡೆದಿವೆ
ಶವಯಾತ್ರೆಯಲಿ ಜೊತೆಗೆ…

ಇನಿಯನು ತಾ ಬರುವನೆ
ಹೊಸ ಉಸಿರ ಜೊತೆಗೆ
ಇಲ್ಲವೆ ಸಂಸ್ಕಾರ ಮಾಡಲು
ಕೊನೆ ಫಳಿಗೆಯಲಿ ಚಿತೆಗೆ…!!

ರಾಜ್…!!

Friday 7 March 2014

ತಾಯಿಯ ರೂಪದಲಿ
ದೇವರ ಪ್ರತಿರೂಪ
ಸೋದರಿಯು ಜೊತೆಗಿರೆ
ವಾತ್ಸಲ್ಯದ ಆಲಾಪ...

ಮಗಳಾಗಿ ನೀನಿರಲು
ತಾಯಿಯ ತದ್ರೂಪ
ಗೆಳತಿಯಾಗಿ ಬದುಕಿನಲಿ
ಸಾಂತ್ವನದ ಸಂತಾಪ...

ಒಲವಿನ ಮಡದಿಯಾಗಿ
ಮನೆಬೆಳಗೊ ನಂದಾದೀಪ
ಭೂ ತಾಯಿ ಹೆಣ್ಣಾಗಿ
ನಮ್ಮ ಕಾಯುವ ದೈವ...

ಓ ಹೆಣ್ಣೆ ನೀನಿರುವಲ್ಲಿ
ದೇವತೆಗಳ ವಾಸ
ಬಗೆಬಗೆಯ ರೂಪದಲಿ
ನಿನ್ನ ಕಾಯಕವೆ ಕೈಲಾಸ...

ಪ್ರತಿಫಲ ಬಯಸದೆ
ಪರಿಶ್ರಮದ ದುಡಿಮೆ
ಮಹಿಳೆಯೆ ನಿನಗೊಲಿದ
ಬಹುದೊಡ್ಡ ಹಿರಿಮೆ...!!!

( ಮಾರ್ಚ-8 : " ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ" ಪ್ರಯುಕ್ತ ಸಣ್ಣದೊಂದು ಪ್ರಯತ್ನ )

[ ಮಹಿಳಾ ದಿನಾಚರಣೆಯ ಶುಭಾಶಯಗಳು ]

ರಾಜ್..!!

Thursday 6 March 2014

ನಿನ್ನ ಕಣ್ಣಂಚ ಸಂಚಲ್ಲಿ
ಹೊಸ ಮಿಂಚೊಂದು ಕಂಡೆ
ಆ ಮುಂಗುರುಳ ಗುಂಗಲ್ಲಿ
ಈ ಮನಸ ಕಳಕೊಂಡೆ…

ಒಮ್ಮೆ ತೆರೆದುಬಿಡು
ಹೃದಯದ ಬಾಗಿಲು
ಒಳಬರಲೆ ಒಲವೆ
ನೀ ಅನುಮತಿಯ ಕೊಡಲು…

ನೆನಪುಗಳ ಜೊತೆಗೂಡಿ
ಕನಸುಗಳು ಕಾಡಲು
ಕಣ್ಣ ರೆಪ್ಪೆಯಲ್ಲಿಟ್ಟು
ನಿನ್ನ ನಾ ಕಾಯುವೆ…

ಬೆಳದಿಂಗಳ ಬಾನಿನಲಿ
ಮೂಡಿದಂಥ ಪೂಣ೯ಚಂದ್ರ
ನಿನ್ನ ನೊಡಿ ಮೊಹಗೊಂಡು
ಹಗಲು ಕೂಡ ಇಣುಕುತಿಹನು…

ಕೊಟ್ಟು ಬಿಡು ಹೃದಯವ
ನಾ ಕದಿಯುವ ಮುನ್ನವೆ
ಒಲವ ಬಯಸಿ ಬಂದಿರುವೆ
ಇನ್ನು ಒಲಿಯಬಾರದೇತಕೆ…!!

ರಾಜ್…!!
ಸುಂದರಿಯ
ಅಂದಕ್ಕೆ
ಚೆಂದದ
ಗುಲಾಬಿ…

ನನ್ನವಳ
ಮುಡಿಯಲ್ಲಿ
ಇಮ್ಮುಡಿಯು
ಸೌಂದರ್ಯ…

ಓ ಗುಲಾಬಿಯೆ
ನೀನೆಷ್ಟು ಧನ್ಯ
ನೀನಿದ್ದರೆ ಜೊತೆಯಲ್ಲಿ
ಮನದನ್ನೆ ಇನ್ನೂ ಚೆನ್ನ…!!
ಹೇ ಹೃದಯಾ
ಒಮ್ಮೆ ಹೇಳಲಾರೆಯಾ
ನನ್ನ ಬಾಳ ಪುಟದಲಿ
ಕವಿತೆಯಾಗಲಾರೆಯಾ…

ಪಲ್ಲವಿ ಇಲ್ಲದ ಚರಣ
ನೀನಿಲ್ಲದ ಈ ಜೀವನ
ತಾಳವು ತಪ್ಪಿದ ಗಾಯನ
ಮನಸಿನ ಮೂಕರೊಧನ…

ಗುಲಾಬಿ ಕೆನ್ನೆಯ
ಕೋಮಲಾಂಗಿಯೆ
ಸುಮ್ಮನೆ ಇದ್ದ ಮನಸಿಗೆ
ಹೊಸ ಕನಸೊಂದ ತೋರಿದೆ…

ಮನದಂಗಳದಿ ಅರಳಿದ ಹೂವೆ
ಮುಳ್ಳಾಗದೆ ಬದುಕಿಗೆ
ಮುಡಿಯಲಿ ನಗುತ
ಪಡೆವ ಸಾಥ೯ಕ ಬದುಕ…!!
ನಿನ್ನ ಸನಿಹ
ಸೇರೊ ತವಕ
ಒಂದೆ ಬಯಕೆ
ನನ್ನಿ ಮನಕೆ…

ನಿನಿತ್ತ ಸುಳಿದಾಗ
ತಂಗಾಳಿ ಹಿತವಾಗಿ
ಬೆರೆಲ್ಲ ಮರೆತಾಗಿದೆ
ನಿನ್ನ ವಿನಹ ಬೇರೆ ಏನಿದೆ…

ಉಸಿರುಸಿರೆ ನಿನಗಾಗಿ
ನನ್ನುಸಿರೆ ನೀನಾಗಿ
ಮನಸಿಂದು ಮಗುವಾಗಿದೆ
ಮಧುರ ಪಿಸುಮಾತಿಗೆ…

ನೀ ಬಂದು ನಿಂತಂತೆ
ನಕ್ಕು ಬಳಿ ಕರೆದಂತೆ
ನಿನ್ನದೇ ಚಟುವಟಿಕೆ
ಕನಸಲ್ಲೂ ಕನವರಿಕೆ …

ನಿನ್ನ ಸನಿಹ
ಸೇರೊ ತವಕ
ಒಂದೇ ಬಯಕೆ
ನನ್ನಿ ಮನಕೆ…!!

ರಾಜ್…!!
ನಿನ್ನ ಸನಿಹ
ಸೇರೊ ತವಕ
ಒಂದೆ ಬಯಕೆ
ನನ್ನಿ ಮನಕೆ…

ನಿನಿತ್ತ ಸುಳಿದಾಗ 
ತಂಗಾಳಿ ಹಿತವಾಗಿ
ಬೆರೆಲ್ಲ ಮರೆತಾಗಿದೆ
ನಿನ್ನ ವಿನಹ ಬೇರೆ ಏನಿದೆ…

ಉಸಿರುಸಿರೆ ನಿನಗಾಗಿ
ನನ್ನುಸಿರೆ ನೀನಾಗಿ
ಮನಸಿಂದು ಮಗುವಾಗಿದೆ
ಮಧುರ ಪಿಸುಮಾತಿಗೆ…

ನೀ ಬಂದು ನಿಂತಂತೆ
ನಕ್ಕು ಬಳಿ ಕರೆದಂತೆ
ನಿನ್ನದೇ ಚಟುವಟಿಕೆ
ಕನಸಲ್ಲೂ ಕನವರಿಕೆ …

ನಿನ್ನ ಸನಿಹ
ಸೇರೊ ತವಕ
ಒಂದೇ ಬಯಕೆ
ನನ್ನಿ ಮನಕೆ…!!

ರಾಜ್…!!

ಗೆಳತಿ
ನನ್ನ
ನರ -
ನಾಡಿಗಳಲ್ಲಿ
ಉಕ್ಕಿ
ಹರೆಯುತ್ತಿದ್ದ
ನಿನ್ನೆಡೆಗಿನ
ಪ್ರೀತಿಯನ್ನು
ದಯೆ
ತೋರದೆ
ಕೊಂದ
ನಿನ್ನನ್ನು
ನರ ಹಂತಕಿ
ಎನ್ನಬಹುದೇ…?
ನನ್ನ
ಪ್ರತಿ
ಕವಿತೆಗಳಲ್ಲಿ
ಇಣುಕಿ
ನೆನಪುಗಳನ್ನು
ಕೆಣಕಿ
ಹೋಗುವ
ನೀನು
ಬದುಕ
ಬಂಡಿಗೆ
ನೊಗವಾಗಬಾರದೇ.?
ಆಸೆಗಳು ನೂರಾರು
ಮನದಲ್ಲಿ ಪುಟಿದಿರಲು
ಭಾವಗಳು ಒಂದೊಂದೇ
ಸಂಪನ್ನು ಹೂಡಿಹವು…

ಮೋಹವು ಮನದೊಳಗೆ
ಬಲವಾಗಿ ಬೇರೂರಿ
ಮೌಢ್ಯದ ಕತ್ತಲಲಿ
ತಪ್ಪನ್ನು ಮಾಡುತಿದೆ …

ಆಸೆಗೆ ಅಂಕುಶವುಂಟೆ
ಭಾವನೆಗೆ ಮೌಲ್ಯವು
ಮೋಹದ ಪರವಶಕೆ
ಸಿಲುಕದ ಮನಸುಂಟೆ…?

(ಸಂಪು - ಸತ್ಯಾಗ್ರಹ /ಮುಷ್ಕರ )

ರಾಜ್…!!
ನಿನ್ನ
ಹಂಸದಂಥ
ನಡಿಗೆ
ಕಂಡು
ಹಂಸವು
ನಾಚಿ
ನೀರಾಯಿತು…

ನಿನ್ನ
ಮಧುರ
ಧ್ವನಿಗೆ
ಕೋಗಿಲೆಯೆ
ಮೂಕಾಯಿತು…

ನನ್ನ
ಪಾಡೆನು
ಹೇಳಲಿ
ನಾನೊಬ್ಬ
ಸಂತ…!!
ಬಿಸಿಲೂರ ಬಯಲಿನಲಿ
ಹುಟ್ಟಿತೊಂದು ಪ್ರೇಮಕಾವ್ಯ
ಬಯಲುಸೀಮೆಯ ಹುಡುಗಿ
ಕನಸು ಕಂಗಳ ಹುಡುಗ…

ಅವಳಂದಕೆ ಮನಸೋತವ 
ಅವಳೆಂದರೆ ಜೀವ
ಸ್ನೇಹದ ಸೇತುವೆ ಮೇಲೆ
ಅರಳಿತೊಂದು ಪ್ರೀತಿಯ ಹೂವ

ಸ್ವಚ್ಛಂದದ ಬಾನಿನಲ್ಲಿ
ಬಾನಾಡಿಗಳು ತಾವಾಗಿ
ಪ್ರೀತಿಯ ಆಗಸದಲ್ಲಿ
ತೇಲಿತ್ತು ಜೋಡಿ ಹಕ್ಕಿ…

ಹಗಲಿರುಳು ಪ್ರತಿಸಮಯ
ಹಕ್ಕಿಗಳ ಕಲರವ
ಅತಿ ಮಧುರ ಅನುರಾಗದಿ
ಮಿತಿ ಮೀರಿದ ಮೋಹ…

ಯಾವ ದೈವ ಶಾಪ ನೀಡಿತೊ
ಯಾರ ಕಣ್ಣ ದೃಷ್ಟಿ ತಾಗಿತೊ
ಪ್ರೀತಿಯ ಸಾಗರದಲ್ಲಿ
ಸಂಶಯದ ಬಿರುಗಾಳಿ…

ಬಾಳ ನೌಕೆಯಲ್ಲಿಗ
ಒಬ್ಬಂಟಿ ಪಯಣಿಗರು
ಅವಳೊಂದು ತೀರ
ಅವನೊಂದು ತೀರ…!!

ರಾಜ್…!!
ಕಾಯುತ್ತಿದ್ದೆನೆ ಇನ್ನು
ನಿನ್ನ ಒಂದು ಒಪ್ಪಿಗೆಗಾಗಿ
ಸಾಯುತ್ತಿದ್ದೆನೆ ದಿನವು
ಪ್ರೀತಿಸಿದ ತಪ್ಪಿಗಾಗಿ…

ಮನಸಿಗಿಲ್ಲ ನೆಮ್ಮದಿ
ಸಿಗುವುದೇ ನಿನ್ನ ಸಮ್ಮತಿ
ಕನಸುಗಳ ಜನಿಸುವಿಕೆ
ನೆನಪುಗಳು ಕೊಲ್ಲುತಿವೆ…

ಬಸವಳಿದ ಹೃದಯಕ್ಕೆ
ಪ್ರೀತಿ ಮಳೆಯ ಸಾಂತ್ವನ
ಕಲ್ಲು ಹೃದಯ ಕರಗುವುದೆ
ಒಲವ ಮಳೆಯ ಸುರಿಸುವುದೆ…

ಕೊಲ್ಲು ಹೃದಯವೆ ಕನಸುಗಳ
ಒಲ್ಲದ ಹುಡುಗಿಯ ನೆನಪುಗಳ
ಬ್ರಹ್ಮ ಗಂಟಿಗೆ ಅಂಟುವ ಮೊದಲು
ಕಳಚಿಕೊ ಪ್ರೀತಿಯ ನಂಟನ್ನ…

ಕಾಯುತ್ತಿದ್ದೆನೆ ಪ್ರೀತಿಸಿ ನಿನ್ನನ್ನ
ಮಾಡಲಾರೆಯ ನಿನೊಮ್ಮೆ ತಪ್ಪನ್ನ...!!?

ರಾಜ್…!!
ನೆನಪಿನುಯ್ಯಾಲೆಯಲ್ಲಿ
ಜೀಕುವ ಬಾ ಗೆಳತಿ
ಒಲವಿನ ಫಳಿಗೆಗಳ
ಮೆಲುಕು ಹಾಕುವ ಬಾ

ಬೆಳದಿಂಗಳಿರುಳಿನಲಿ
ತಂಗಾಳಿ ತಂಪಿನಲಿ
ನೆನಪಿನ ಜೋಕಾಲಿ
ಜೊತೆ ಸೇರಿ ಜೀಕುತಲಿ

ಕೆಣಕಿದಾಗ ಮುನಿಸಿಕೊಂಡ
ಮುನಿಸಿದಾಗ ರಮಿಸಿದಂಥ
ಮನದಿ ಮಧುರ ನೆನಪುಗಳ
ಅಲೆಯೊಂದು ಸುಳಿದಾಡಿ…

ಕಣ್ಣ ರೆಪ್ಪೆ ಮಾತನಾಡಿ
ಮನಸು ಮನಸು ಸೇರಿಕೊಂಡು
ಕಂಡಂತ ಕನಸುಗಳ
ನೆನೆಯುವ ಸವಿಸಮಯ…

ಜೋರಾಗಿ ಜೀಕದಿರು
ನೆನಪಿನುಯ್ಯಾಲೆಯ
ಹಾರಿ ಬಿಟ್ಟಾವು ದೂರಕ್ಕೆ
ನೆನಪುಗಳು ಮನಸಿಂದ…!!

ರಾಜ್…!!

ಕಳೆದು ಹೋಗಿದ್ದೆನೆ
ನನ್ನೊಳಗೆ ನಾನು
ಕಾಣದ ಕಡಲೊಳಗೆ
ಸಿಲುಕಿರುವ ಮೀನು…

ಮೌನದಲಿ ಅತಿಮೌನಿ
ಮಂಕು ಕವಿದ ಮತೀ
ಭಾವನೆಗಳು ಬಸಿರಾಗಲು
ಬಲವಂತದ ಭ್ರೂಣ ಹತ್ಯೆ…

ಅಗೆದಷ್ಟು ಆಳದಲಿ
ಬತ್ತಿರುವ ಭಾವ
ಚಿಗುರೊಡೆಯುವುದೆ ಮತ್ತೆ
ಜೀವ ಸಂಜೀವಿನಿ…

ಕಳೆದು ಹೋಗಿದ್ದೆನೆ
ನನ್ನೊಳಗೆ ನಾನು
ಹುಡುಕಿ ಕೊಳ್ಳಲೆಬೇಕು
ಪೂತಿ೯ ಕಳೆಯುವ ಮುನ್ನ…!!

ರಾಜ್…!!!

ನಿನ್ನ ಮರೆಯಲು
ಕವಿತೆಗಳ ಮೊರೆಹೊದೆ
ಪ್ರತಿಯೊಂದು ಪದಗಳಲು
ನಿನ್ನ ನೆನಪಿನ ನೆರಳು…

ಅಕ್ಷರಗಳ ಕುಂಜದಲಿ
ಪದಗಳಿಗೇಕೊ ಬರ
ಮರೆಯಲೆನಗೆ ಕೆಲವು
ಅಕ್ಷರಗಳ ಸಾಲ ಕೊಡು…

ಮರೆಯಬೇಕು ನಾನು
ಬರೆಯಬೇಕು ಕವಿತೆ
ನಿನ್ನ ಋಣದಲಿ ಪದ್ಯ
ನಿನಗೆಂದೆ ಅಪ೯ಣೆಯು…!!

ರಾಜ್…!!

ಮನದ ಬೇಗುದಿಯಲ್ಲಿ
ಮೌನದಲಿ ಕಾಡಿದ
ನಿನ್ನ ನೆನಪುಗಳ
ಕತ್ತ್ಹಿಸುಕಿ ಕೊಂದಿರುವೆ…

ಉಸಿರಲ್ಲಿ ಬೆರೆತ ಉಸಿರನ್ನ
ಹೃದಯದಲ್ಲಿ ಬಲಿತ
ನನ್ನ ಪ್ರೀತಿಯನ್ನ
ಕಸಿ ಮಾಡಿ ತೆಗೆದಿರುವೆ…

ಮಸಣದ ಬೀದಿಯಲ್ಲಿ
ಹೊತ್ತು ಸಾಗುತ್ತಿದ್ದೆನೆ
ನಿನ್ನ ನೆನಪುಗಳ
ಕಳೆಬರಹ…

ಸುತ್ತ ಮುತ್ತಲು ಸುಳಿಯದಿರು
ಮತ್ತೆ ಜೀವ ಬಂದಾತು
ನಿನ್ನ ನೊಡಿದ ಕೂಡಲೆ
ಸತ್ತ ನೆನಪುಗಳಿಗೆ…!!

ರಾಜ್…!!
ಕಾಮದ ಸಂಚಿಗೆ
ಯಾರದೊ ತಪ್ಪಿಗೆ
ಬಸಿರಲ್ಲೆ ಉಸಿರ
ತ್ಯಾಗ…
.
.
ಕ್ಷಣಿಕ ಸುಖದ
ತೀರದ ದಾಹಕ್ಕೆ
ಹೊರಬಂದ
ಹಸುಗೂಸು
ನಾಯಿಗಳ
ಪಾಲು…!!
ಕರುಳ ಬಳ್ಳಿಯೊಂದು 
ಬಳ್ಳಿಯಿಂದ ದೂರವಾಗಿ
ಹೆತ್ತ ಕರುಳ ಕತ್ತರಿಸಿ
ಕಣ್ಣ ನೀರ ತರಿಸಿದೆ…

ಹೊತ್ತು -ಹೆತ್ತು ಸಲಹಿದವಳ
ಬೆಲೆಯನರಿಯೆ ದೂರತಳ್ಳಿ
ಕರುಣೆ ಮರೆದ ಕಂದನೀಗ
ಕತ್ತರಿಸಿದ ಕರುಳಬಳ್ಳಿ…

ಸತಿಯ ಮಾತು ಕೇಳಿ ತನ್ನ
ಹೆತ್ತ ಕರುಳ ಹೊರೆಯಂದು
ಹೊರಗಟ್ಟಿದ ಮಗರಾಯ
ಹಲಬುತಿತ್ತು ತಾಯಿ ಹೃದಯ…

ಇಂದು -ನಿನ್ನೆ ಬೆಸೆದ ಬಂಧ
ಸತಿ -ಸುತರ ಸಂಬಂಧ
ಎಷ್ಟೆ ಜನುಮ ಜನಿಸಿದರು
ಋಣತೀರದು ಅಮ್ಮ ನಿನ್ನ ಅನುಬಂಧ…

ಮೂಢ ಮನವೆ ಮರೆಯದಿರು
ಹೆತ್ತ ಕರುಳ ನೊಯಿಸದಿರು
ಜನುಮದಾತೆ ನಮಗೆ ಎಲ್ಲ
ತಾಯಿಗಿಂತ ದೇವರಿಲ್ಲ…!!

ರಾಜ್…!!
ನಿನ್ನ
ಪ್ರೀತಿಸಿದ
ತಪ್ಪಿಗೆ…

ನಾನೀಗ
ಭಾವನೆಗಳ
ಸಂಕೋಲೆಯಲ್ಲಿ
ಬಂಧಿ…

ವಿರಹದ
ಜೀವಾವಧಿ
ಗಿಂತ
ದಯಾಮರಣವೇ
ಲೇಸು…!!

ರಾಜ್…!!
ಗೆಳತಿ
ನಿನ್ನ
ಬರುವಿಕೆಗೆ
ಕಾದು - ಕಾದು
ಸುಸ್ತಾದ
ಹೃದಯವೀಗ
.
.

ಬೆಚ್ಚನೇ
ಮಲಗಿದೆ
ನೀ
ಬಿಟ್ಟು ಹೋದ
ನೆನಪುಗಳ
ಜೊತೆ…!!

ರಾಜ್…!!
ಪ್ರೇಮದ ಆರಂಭಕ್ಕೆ
ಇಲ್ಲದ ಕ್ಷಣ -ದಿನ
ಪ್ರೇಮ ನಿವೆದನೆಗೆಂದೆ
ಪ್ರೇಮಿಗಳ ದಿನ…

ಕಣ್ಣೊಟಗಳ ಕಾದಾಟಕ್ಕೆ
ಮನಸುಗಳ ಮಿಲನ
ಪ್ರೀತಿಯ ಮಾಯಾಜಾಲಕ್ಕೆ
ಹೃದಯಗಳ ಬಲಿದಾನ…

ಸಮಯದ ಅರಿವಿರದು
ತೃಷೆಗಳ ನೆನಪಿರದು
ಹುಚ್ಚು ಹೃದಯಕ್ಕೀಗ
ಹೊಸದೊಂದು ಖಯ್ಯಾಲಿ…

ಪ್ರೀತಿಯಲಿ ಪಾವಿತ್ರ್ಯತೆ
ಉಳಿಯಲಿ ಚಿರಕಾಲ
ಪ್ರೇಮದಲಿ ನಂಬಿಕೆಯು
ಬಹುಮುಖ್ಯ ಬಾಳೆಲ್ಲ…

ಹೃದಯವದು ನೊಂದರೆ
ವಿರಹವೆ ಅನುದಿನ
ಪ್ರೇಮ ನಿವೇದನೆಗೆ
ಬೇಕೆ ಪ್ರೇಮಿಗಳ ದಿನ…?

ರಾಜ್…!!

Wednesday 12 February 2014

ಹೊರಟಿಹಳು ಅವಳು
ಮನಸಿಂದ ಹೊರಗೆ
ನನ್ನನ್ನು ತೊರೆದು
ಬೇರೊಂದು ಮನೆಗೆ...

ಕಾಡುವ ಕನಸುಗಳಲ್ಲಿ
ಮಾಸದ ನೆನಪುಗಳಲ್ಲಿ
ಅಚ್ಚಳೀಯದೆ ನೀನಿರಲು
ಮುಚ್ಚಳಿಕೆ ನಿನಗೆ ಈ ಹೃದಯಾ...

ರಕ್ತದ ಕಣ-ಕಣದಲಿ
ಹೃದಯದ ಪ್ರತಿ ಬಡಿತದಲಿ
ನನ್ನಲ್ಲಿ ನೀನು ಅನುರಕ್ತವಾಗಿರಲು
ಬೇರೊಂದು ಮನದ ಕರಿನೆರಳು ಕಾಡುತಿದೆ...

ಸಂತಸದ ಹೃದಯದಲ್ಲಿಗ
ಅಲೆಗಳ ಅಪ್ಪಳಿಸುವಿಕೆ
ಅಗಲುವಿಕೆಯ ನೋವಿನಲಿ
ಸಾವಿರ ನೆನಪುಗಳ ದಾಳಿ...

ಗೆಳತಿ ನನ್ನ ನೀ ತೊರೆದು
ಸೇರಬಹುದು ಬೇರೊಂದು ಮನೆಯ
ಆದರೆ ನೀ ಸೇರಬಲ್ಲೆಯಾ
ಬೇರೊಂದು ಮನವ..?

ರಾಜ್..!!
ಕಡಲಿನ ದಡದೊಳಗೆ
ಮರಳಿನ ಮಡಿಲೊಳಗೆ
ಒಡನಾಡಿ ನೀ ನನ್ನ
ಒಬ್ಬಂಟಿ ಮಾಡಿದೆಯಾ…

ಆ ಸಂಜೆ ತಂಪಲ್ಲಿ
ಮರಳಿನರಮನೆ ಕಟ್ಟಿ
ಅಲೆಗಳ ಆಲಿಂಗನಕೆ
ಮೈಮರೆತ ನೆನಪಿನ್ನು ಹಸಿರು…

ಮರಳದಂಡೆಯ ಮೇಲೆ
ಹೆಜ್ಜೆ ಗುರುತುಗಳ ಚಿತ್ತಾರ
ಅಲೆಗಳಿಗೆಕೊ ಅವಸರ
ಅಳಿಸಿ ಹಾಕುವ ಕಾತರ…

ಬಾ ಗೆಳೆಯಾ ಮತ್ತೊಮ್ಮೆ
ಜೊತೆಯಾಗಿ ನಡೆವ
ಅಲೆಗಳ ಅಹಂಕಾರಕ್ಕೆ
ಪ್ರತ್ಯುತ್ತರ ಕೊಡುವ…

ಕಡಲು ಕರೆಯುತಿದೆ
ಹೃದಯ ಕೊರಗುತಿದೆ
ಬಾ ಬೇಗ ಗೆಳೆಯಾ
ನಿನಗಾಗಿ ಕಾಯುವೇನು…!!

ರಾಜ್…!
ಬೇಕಿಲ್ಲ ನನಗೆ
ಸಕಾ೯ರದ ವಸತಿ
ಯೊಜನೆ
ಆಶ್ರಯದ ಮನೆ…

ನಾನೀಗ
ಹಾಯಾಗಿದ್ದೆನೆ
ನನ್ನವಳ ಹೃದಯದಲ್ಲಿ
ಬೆಚ್ಚನೆ…!!

ರಾಜ್…!!
ಗೆಳತಿ
ಹೀಗೆ ಒಮ್ಮಿಂದೊಮ್ಮೆಲೆ
ನಿನ್ನ ಹೃದಯದಿಂದ
ಒಕ್ಕಲೆಬ್ಬಿಸುವ
ಮೊದಲೇ ಹೇಳಿದ್ದರೆ

ಬೇರೊಂದು
ಹೃದಯಕ್ಕೆ
ಪಕ್ಷಾಂತರ
ಮಾಡುತ್ತಿದ್ದೆ :-P:-P

ರಾಜ್…!!
ನೀಲಿ ಕಂಗಳ ಹುಡುಗಿ
ನಿನ್ನ ಮೇಲೆಕೊ ಮನಸು
ತುಸು ಒಲವ ತೊರಿ ನೀ
ಬೆಳಗೆನ್ನ ಈ ಬದುಕು…

ಕನಸು ಕಂಗಳ ಹುಡುಗ ನಾ
ಬರಿ ನಿನ್ನ ಕನಸುಗಳೆ
ಹೊಳೆವ ಆ ಕಂಗಳ ನೊಡಿ ನಶೆಯು ಅಮಲೆರುತಿದೆ…

ಎಲ್ಲ ಮರೆತ ಧ್ಯಾನಿ ನಾನೀಗ
ಏಕಾಂತ ಮೌನದಲೂ ನಿನ್ನ ಕನವರಿಕೆ
ಹೃದಯದ ತುಂಬೆಲ್ಲ
ಸಹಿಸದ ಚಡಪಡಿಕೆ…

ಪಡುವಣದಿ ಭಾಸ್ಕರನೆ
ಮನೆ ಸೇರೊ ನೀ ಬೇಗ
ಬೆಳದಿಂಗಳ ಬೆಳಕಿನಲಿ
ಅವಳಂದವ ನೊಡೊ ತವಕ…

ನೀಲಿ ಕಂಗಳ ಹುಡುಗಿ
ನಿನ್ನ ಮೇಲೆಕೊ ಮನಸು
ಒಲವು ತುಂಬಿದ ಹೃದಯ
ಕಣ್ಣ ತುಂಬಿವೆ ಕನಸು…!!

ರಾಜ್…!!

ಅಗೊ ಅದಾರೊ
ಅನತಿ ದೂರದಲ್ಲಿ
ಬರಿ ನೆರಳು ಕಾಣುತಿದೆ
ಕೈ ಬೀಸಿ ಕರೆಯುತಿದೆ…

ತಿಳಿ ಬೆಳದಿಂಗಳಿರುಳಲ್ಲಿ
ಚಳಿಗಾಲದ ಚಳಿಯಲ್ಲಿ
ಮೈಯೆಲ್ಲಾ ಬೆವರುತಿದೆ
ಕೈ -ಕಾಲು ನಡಗುತಿವೆ…

ಸುತ್ತಲು ಮುತ್ತಿದೆ
ಕಪ್ಪನೆ ಕತ್ತಲು
ಚಂದಿರ ಕೂಡಾ
ಮೋಡದಿ ಮುಚ್ಚಲು…

ಹತ್ತಿರ ಬರುತಿದೆ ನೆರಳದು ತೀರ
ಹೃದಯದ ಬಡಿತ ಬಲು ಜೊರ
ಓಡುವ ಭರದಲಿ ಜಾರಿ ಬಿದ್ದೆ
ನಿದ್ರೆಯಲ್ಲಿ ನನ್ನವಳ ಝಾಡಿಸಿ ಒದ್ದೆ… :-P:-P

ರಾಜ್…!!

ಗೆಳತಿ
ನಿನ್ನೊಡನೆ
ಹಗಲಿರುಳು
ಪ್ರತಿ ಸಮಯ
ಮಾತನಾಡುವ ಬಯಕೆ…

ಆದರೆ…

ನನ್ನ
ಮೊಬೈಲಿನ
ಹೊರಹೊಗುವ ಕರೆ
2.ರೂಪಾಯಿ
ಪ್ರತಿ ನಿಮಿಷಕ್ಕೆ…

ಒಳ ಬರುವ ಕರೆ
ಉಚಿತ
ನೀ ಮಾಡಿದರೆ ಫೊನು
ಮಾತನಾಡುವೆನು
ಖಚಿತ…!!

ರಾಜ್…!!
ಕಾಂಕ್ರೀಟು ಕಾಡಿನಲಿ
ಕಣ್ಮರೆಯು ಗುಬ್ಬಚ್ಚಿ
ನೆನಪಿನ ಪುಟತೆಗೆದು
ಇಣುಕಿದರು ನಾಪತ್ತೆ…

ಚಿಂವ್ ಚಿಂವ್ ಗುಟ್ಟುತ್ತ
ಕಣ್ಮನವ ಸೆಳೆಯುತ್ತ
ಸಂತಸದಿ ಹಾರಾಡುತ್ತಿದ್ದ
ಕಲರವವು ಈಗೀಲ್ಲ…

ಮನೆಯ ಮೂಲೆಯಲ್ಲಿ
ಗಿಡಮರಗಳ ತುದಿಯಲಿ
ಗೂಡುಗಳ ಕಟ್ಟುತ್ತಾ
ಗುಬ್ಬಚ್ಚಿಗಳ ದಂಡು…

ಮನುಷ್ಯನ ಅತೀ ಆಸೆಗೆ
ಮರಗಳ ಮಾರಣಹೋಮ
ಕಾಂಕ್ರೀಟಿನ ಕಾಡಿನಲಿ
ಗುಬ್ಬಚ್ಚಿಗಳ ನಿನಾ೯ಮ…

ಆಧುನಿಕತೆಯ ಆಡಂಬರಕೆ
ಎಲ್ಲವೂ ಯಾಂತ್ರಿಕತೆಯವಾದ
ಮುಂದಿನ ಸಂತತಿಗಳಿಗೆ
ಯಂತ್ರಗಳ ಗುಬ್ಬಚ್ಚಿಯ ಒಡನಾಟ…!!

ರಾಜ್…!!

ಅವಳು
ನನ್ನ ನೋಡಿ
ತಿರುತಿರುಗಿ ನಕ್ಕಾಗ

ನಾ
ನಗುವುದನ್ನೆ
ಮರೆತಾಗಿದೆ

ನಗುವೆ
ನನ್ನ ನೋಡಿ
ಅಣಕಿಸಿ ನಗುತಿದೆ…!!

ರಾಜ್…!!
ಮೊದಮೊದಲು
ನಿನ್ನ ಪ್ರೀತಿಯ
ಸ್ವಗ೯ದಲ್ಲಿ ತೇಲಾಡಿ…

ನೀ ದೂರಾದ
ಘಳಿಗೆ
ಈಲ್ಲೆ
ನರಕವನ್ನು ಕಂಡೆ…!!

ರಾಜ್…!!
ಗೆಳತಿ
ಮೊದಲ ಬಾರಿ
ನಿನ್ನ ನೋಡಿ
ಆದ ಆಘಾತಕ್ಕೆ

ವಿಮೆ
ಮಾಡಿಸಿ
ಈಗಲೂ ಕಂತು
ಕಟ್ಟುತ್ತಿದ್ದೆನೆ
ಚಾಚು ತಪ್ಪದೆ…!!

ರಾಜ್…!!
ಇನಿಯಾ
ಅಂದು
ನಿನ್ನೊಡನೆ
ಏಕಾಂತದಲ್ಲಿ
ಕೂಡಿಕೊಂಡು
ಕಂಡ
ಕನಸಿಗೀಗ
.
.
.
ಮೂರು
ತಿಂಗಳು…!!

ಮನಸ ಜೊತೆಯಲ್ಲೆ
ಕನಸ ಕದ್ದವಳೆ
ಪ್ರತಿರಾತ್ರಿ ನಿದಿರೆಯಲಿ
ಬಹುವಾಗಿ ಕಾಡಿದಳೆ…

ಬೆಚ್ಚನೆಯ ಹೃದಯದಲಿ
ಅಚ್ಚಳಿಯದೆ ಉಳಿದು
ಪ್ರತಿಯಾಗಿ ಸುಂಕವ
ಕೊಡದೆ ಉಳಿದವಳೆ …

ಮೆಲ್ಲನೆ ಬಳಿಬಂದು
ಮುತ್ತಿನ ಮಳೆಗರೆದು
ಹಗಲಿನಲಿ ಚಂದ್ರನ
ತೊರಿಸಿ ಹೊದವಳು…

ಬರಲಿಲ್ಲ ಗೆಳೆಯಾ
ಹಿಂತಿರುಗಿ ಅವಳು
ಕೈಗೆ ಸಿಗದ ತಂಗಾಳಿಯಂತೆ
ಬದುಕಲ್ಲಿ ಸಿಕ್ಕ ಮಾಯಾಮೃಗವು…!!

ರಾಜ್…!!
ಗೆಳೆಯ

ಕಾದ
ಕಬ್ಬಿಣದ
ಕಾವಿಗಿಂತ
.
.
ಹೆಚ್ಚು
.
.
ಬರಸೆಳೆದು
ನೀ ಕೊಡುವ
ನಿನ್ನಪ್ಪುಗೆಯ
ಬಿಸಿ…!!
ಮರೆವಿನಂಥ ಕಾಯಿಲೆ
ಬರದು ಯಾಕೋ ಈಗಲೆ
ನಿನ್ನ ಮರೆವ ಹಂಬಲ
ಸಿಗದು ಮನದ ಬೆಂಬಲ...

ನನ್ನ ಮರೆತ ನಿನ್ನಯ
ಒಮ್ಮೆ ನೋಡುವಾಸೆಯು
ಕನಸು ಕೊಲ್ಲೊ ಮುನ್ನವೆ
ಮಾತನಾಡುವಾಸೆಯು...

ಮನಸಿನಾಳದಲಿ ಮೊಳೆತ
ನಿನ್ನ ನೆನಪಿನ ಸಸಿಗಳ
ಚಿವುಟಿ ಹಾಕಲು ಏಕೊ
ನೆರಳಿಗೂ ಕೂಡಾ ಹಿಂಸೆ...

ನಿನ್ನ ಹೊರತು ಕಣ್ಣಿಗೆ
ಬೇರೆ ಕನಸು ಬಾರದು
ಎಲ್ಲ ಮರೆಯಲ್ಹೇಳಿದ
ಮನಸಿಗೆ ನನ್ನ ಮೇಲೆಯೆ ಮುನಿಸು...

ಓ ಮರೆವು ಎನ್ನೊ ಕಾಯಿಲೆ
ಬಂದು ಅಪ್ಪಿಕೊ ಒಮ್ಮೆಲೆ
ಮರೆಯದುದೆಲ್ಲವ ಮರೆಸಿಬಿಡು
ಅವಳ ನೆನಪದು ಅಳಿಸಿಬಿಡು...!!!

ರಾಜ್..!!
ಅತೀ
ಆಸೆ
ಎನಗಿಲ್ಲ
ಗೆಳತಿ…

ಇದ್ದಿದ್ದರೆ
ನಿನಗಿಂತ
ಚೆಲುವೆಯ
ನಾ
ಹುಡುಕುತ್ತಿದ್ದೆ…!!
ಅರೆಘಳಿಗೆ
ಮುದ
ನೀಡುವ
ನೆನಪಿನ
ಗುಳಿಗೆ…

ಅಮಲಿಳಿದ
ಮರುಫಳಿಗೆ
ಮತ್ತದೇ
ಖಾಲಿ ಖಾಲಿ
ಭಾವನೆಗಳ
ಸುಳಿಗೆ… !

ರಾಜ್…!!
ನೀನೊಮ್ಮೆ ತೆಗೆದುನೊಡು
ನೆನಪಿನ ಪುಟಗಳ
ಜೊತೆ ಸೇರಿ ಕಂಡಂತಹ
ರಂಗು ರಂಗಿನ ಕನಸುಗಳ…

ಅಲ್ಲಲ್ಲಿ ಕಂಡಾವು
ಮುನಿಸಿಕೊಂಡ ಹಾಳೆಗಳು
ಏಕಾಂತದಲಿ ಕಳೆದಂಥ
ಖಾಲಿ ಖಾಲಿ ಭಾವಗಳು…

ನಡುವಲ್ಲಿ ನಗುತಿರುವ
ಮೌನದ ಮಾತುಗಳು
ಮಸುಕು ಮಸುಕಾಗಿರುವ
ಕಣ್ಣೀರ ಸಾಲುಗಳು…

ನೀನೊಮ್ಮೆ ತೆಗೆದುನೊಡು
ನೆನಪಿನ ಪುಟಗಳ
ಸಿಹಿಗಿಂತ ಕಹಿ ಹೆಚ್ಚಿರೊ
ಬದುಕಿನ ಪುಟಗಳ…!!

ರಾಜ್…!
ತನ್ನೊಡೆಯನ
ಹೃದಯ ಕದ್ಗ
ಒಡತಿಗಾಗಿ
ಹುಡುಕುತ್ತಲಿತ್ತು
ಹೃದಯಾ…

ಅದಕ್ಕೇನು
ಗೊತ್ತು
ಒಡೆಯನ
ಹೃದಯ ಕದ್ದ
ಒಡತಿ
ಈಗ
ಬೇರೊಬ್ಬನ ಸತಿ…!!
ಮೈ - ಮನದೊಳಗೆ
ನರ - ನಾಡಿಯೊಳಗೆ
ನಿನ್ನದೇ
ನಶೆ
ತುಂಬಿರಲು…

ಅಗ್ಗದ
ಮದ್ಯವು
ಸರಿಸಾಟಿಯಾಗುವುದೆ…!!

ರಾಜ್…!!

Sunday 26 January 2014

ಕಾಲನ ಕರೆ ಅದು
ಕರೆಯದೇ ಬರುವುದು
ಕಾಯಕವೆ ಕೈಲಾಸ
ತಪ್ಪದೆ ಮಾಡುವುದು…

ವಿಧಿಯಾಟದ ಮುಂದೆ
ಎಲ್ಲವೂ ತೃಣ ಸಮಾನ
ಪ್ರತಿಯೊಂದು ಜೀವಿಗೂ
ತನ್ನದೇ ಸ್ಥಾನಮಾನ…

ಉಸಿರಿರುವ ತನಕವು
ಹಾರಾಟ -ಹೊರಾಟ -ಹೊಡೆದಾಟ
ಹೆಸರಿನ ಹಸಿವದು ಮುಗಿದ ದಿನ
ದೇಹ ಪಂಚಭೂತಗಳಲ್ಲಿ ಲೀನ…

ಕಾಲನ ಕರೆ ಕಾಯದೆ ಬರುವುದು
ಮಾಡದೆ ಕಾಲಹರಣ
ಋಣತೀರಿದ ಮರುಕ್ಷಣವೇ
ಮುಗಿಲ ಕಡೆ ಪಯಣ…!!

ರಾಜ್…!!
ಗೆಳತಿ ಇದು ರಾಮರಾಜ್ಯವಲ್ಲ
ಹೆಣ್ಣನ್ನು ಇಲ್ಲಿ ಪೂಜಿಸುವುದಿಲ್ಲ
ನಡುರಾತ್ರಿ ನಡೆಯಲು ಸ್ವಾತಂತ್ರ್ಯವಿಲ್ಲ
ಮಾನಕ್ಕು-ಪ್ರಾಣಕ್ಕೂ ಮಾರಕ ರೋಗ...

ಗೆಳತಿ ಇದು ದ್ವಾಪರಯುಗವಲ್ಲ
ಮಾನವ ಕಾಪಾಡಲು ಶ್ರೀಕೃಷ್ಣ ಬರುವುದಿಲ್ಲ
ಕೌರವರ ಸಂತತಿಯು ಹೆಚ್ಚಿದೆ ಈಗಂತೂ
ನಿನ್ನಾ ರಕ್ಷಣೆಗೆ ನೀನಾಗಬೇಕು ಮಾರಿ...

ಕಲಿಯುಗದ ಕರಾಳ ದಿನಗಳು
ಕ್ರೌರ್ಯ ತುಂಬಿದ ಪ್ರತಿ ಕ್ಷಣಗಳು
ಸಹೋದರತೆಯ ಮುಖವಾಡದಿ ಕಾಮದ ಕರಿನೆರಳು
ಯಾರ ನಂಬುವುದೋ.? ಮಾನಾ-ಭಿಮಾನ..

ಕಲಿತುಕೊ ಗೆಳತಿ ಸ್ವರಕ್ಷಣೆ..ಕಲಿಯುಗವಿದು
ಬಾರರು ಯಾರಿಲ್ಲಿ ಬರಿ ತಮಾಷೆ ನೋಡುವರು
ಬದಲಾಗಬೇಕು ನೀ ಅಬಲೆಯಲ್ಲ ಸಬಲೆ
ಸ್ತ್ರೀ ಕುಲಕ್ಕೆ ನೀನಾಗು ಸ್ಪೂರ್ತಿಯ ಸೆಲೆ...!!

ರಾಜ್..!

Tuesday 14 January 2014

ಆಸೆಯ ಭಾವ ಆಗಸಕೇರಿದೆ
ಮೋಹವು ಕೂಡಾ ಆಸರೆ ನೀಡಿದೆ
ಚಂಚಲ ಮನಸು ಹೊಸ-ಹೊಸ ಕನಸು
ಬಯಸಿದ್ದೆಲ್ಲವು ಬದುಕಲಿ ಸಿಗದು...

ದೂರದ ಬೆಟ್ಟವು ಕಣ್ಣಿಗೆ ನುಣ್ಣಗೆ
ಸುಳಿದರೆ ಹತ್ತಿರ ಸಿಗುವುದು ಉತ್ತರ
ಕೈಗೆಟುಕದ ದ್ರಾಕ್ಷಿ ಹುಳಿಯಂದಾದರೆ
ಕಷ್ಟವ ಪಡದಿರೆ ಹೊಟ್ಟೆಯು ತುಂಬದು...

ದುಡ್ಡಿನ ಮದಕೆ ಸತ್ಯವು ದೋಷಿ
ದುಡ್ಡೊಂದಿದ್ದರೆ ಮಿಥ್ಯಕು ದಾಸಿ
ಲೋಹದ ಮೋಹಕೆ ತೀರದ ದಾಹಕೆ
ಜಗವು ಕೂಡಾ ವಿಲಾಸಿ...

ಪ್ರೀತಿಯ ಸೆಳೆತ ಸೇರುವ ತುಡಿತ
ಸಭ್ಯತೆ ಹೆಸರಲಿ ಹೆಚ್ಚಿದ ಹಿಡಿತ
ಸಂಭಂಧಗಳ ನಡುವಣ ಉಸಿರಿನ ಕೊರತೆ
ಬದುಕಿವೆ ಇನ್ನು ಕೃತಕ ಉಸಿರಾಟದ ಜೊತೆ...

ಲೋಭದ ಮನಸಿಗೆ ಅಂಕೆಯು ಇಲ್ಲದೆ
ಕಾಮವು ತನ್ನ ಕಾಣಿಕೆ ನೀಡಿದೆ
ಮೋಹದ ಜಾಲದಿ ಆತ್ಮವು ನರಳಿದೆ
ಆಸೆಯ ಭಾವ ಆಗಸಕೇರಿದೆ...!!

ರಾಜ್..!!

Friday 10 January 2014

ಜೀವನದ ನಾಟಕದಿ
ತನ್ನ ಪಾತ್ರವ ಮುಗಿಸಿ
ಹೊರಟು ನಿಂತಳಾ ಹೆತ್ತಬ್ಬೆ
ಮಕ್ಕಳನು ಕಡೆಗಣಿಸಿ …

ಅಪ್ಪನೆನ್ನುವ ಬೆಪ್ಪ
ತೊರೆದಿದ್ದ ಸಂಸಾರ
ತಾಯಿ -ಮಕ್ಕಳ ತೊರೆದು
ಹೊಗಿದ್ದ ದೇಶಾಂತರ…

ಕಿರುಚಾಡಿ ಕೂಗಾಡಿ
ಅಳುತಿವೆ ಕರುಳಕುಡಿ
ಹಳಿತಪ್ಪಿದ ಬದುಕಿಗೆ
ದಿಕ್ಕಾರು ಕೊನೆವರೆಗೆ…!!

ರಾಜ್…!!

“ಅಮ್ಮನ ಮಡಿಲು -ಸ್ವಗ೯ಕ್ಕು ಮಿಗಿಲು ‘’

ಜೋಗುಳವ ಹಾಡಮ್ಮ
ಜೋಗುಳವ ಹಾಡೊಮ್ಮೆ
ಮನಸಿನ ದುಗುಡವ
ಮರೆತು ಮಗುವಾಗುವೆ ಮತ್ತೊಮ್ಮೆ… 

ಮಡಿಯುವ ಮೊದಲೊಮ್ಮೆ
ಮಡಿಲಲ್ಲಿ ಮಲಗುವೆನು
ಜೋಗುಳವ ಕೇಳುತ್ತ
ನೋವೆಲ್ಲ ಮರೆಯುವೆನು…

ಕಾಲಚಕ್ರದ ಜೊತೆ
ಕಾದಾಟ ಸಾಕಾಯ್ತ
ಸಮಯದ ಜೊತೆ ಓಡಿ
ಮನಶಾಂತಿ ಮರೆಯಾಯ್ತು…

ಜೋಗುಳ ಹಾಡಮ್ಮ
ಜೋಗುಳವ ಹಾಡೊಮ್ಮೆ
ಜೋಗುಳವ ಕೇಳುತ್ತ
ಮರೆಯವೆ ಜಗವನ್ನೆ…!!!

ರಾಜ್…!!
 —
ಹರೆಯದರಲ್ಲಿ
ಹೆತ್ತವರು ಗದರಿದರೆ
ತಿರುಗಿ ಒದರುತ್ತಿದ್ದ …

ಪ್ರಾಯದಲಿ
ಹೆಂಡತಿಗೆ ಹೆದರಿ
ಬೆದರುತ್ತಿದ್ದ…

ಮುಪ್ಪಿನಲಿ
ಮಕ್ಕಳಿಗೆ ಹೆದರಿ
ಮುದುರಿಕೊಂಡ…

ಇಂದಿನ ಉತ್ತರ ಕುಮಾರ…!!!

ರಾಜ್…!!
ನನ್ನೆದೆಯ ಗೂಡಲ್ಲಿ
ನಿನ್ನ ನೆನಪಿಗಾಗಿ
ಕೂಡಿಟ್ಟ ನೆನಪುಗಳು…

ಒಂದೊಂದಾಗಿ ಹೊರ ಬರುತಿವೆ
ಮೊಟ್ಟೆಯಿಂದ ಹೊರಬರುವ 
ಪುಟ್ಟ ಮರಿಗಳಂತೆ…

ರೆಕ್ಕೆ ಬಲಿತು ಹಕ್ಕಿ ಹಾರೊ ಹಾಗೆ
ನೆನಪುಗಳು ಬೆಳೆದು ಕೊಲ್ಲೊ ಮುನ್ನ
ಒಡೆದು ಬಿಡಲೆ ನೆನಪಿನ ಮೊಟ್ಟೆ…!!

ರಾಜ್…!!
ಜಾರುತಿದೆ ಕನಸು
ಏಕೊ ಕಣ್ಣ ಬಿಟ್ಟು
ಜಾರದಿರು ಗೆಳತಿ
ನೀ ಮನಸ ಬಿಟ್ಟು…

ಕನಸಿಗೆಕೊ ನನ್ನ ಮೇಲೆ
ಮುನಿಸು ಬಂದಿದೆ
ಮನಸು ಮಾತ್ರ
ನಿನ್ನೊಳಗೆ ಬೆರೆತುಬಿಟ್ಟಿದೆ…

ಯಾರ ಸಂತೈಸಲಿ ನಾನಿಗ
ಮುನಿದ ಕನಸನ್ನೊ
ನೆನೆವ ಮನಸನ್ನೊ
ಮುಗಿಯದ ಗೊಂದಲ…!!

ರಾಜ್…!!
ನೀ ಕೊಟ್ಟ ನವಿಲುಗರಿ
ಮರಿಯೊಂದ ಹಾಕಿದೆ
ನೆನಪಿನ ಪುಟಗಳಲಿ
ಬಹುವಾಗಿ ಕಾಡಿದೆ…

ನೀನಂದು ದೂರಾದೆ
ಹೇಳದೆ -ಕೇಳದೆ
ನಿನ್ನಯ ನೆನಪಲ್ಲೇ
ನಿನಗಾಗಿ ಕಾದಿದೆ…

ಇನಿಯಾ ನೋಡು ಬಾ ಒಮ್ಮೆ
ನೆನಪಿನ ಪುಟ ತೆಗೆದು
ಮನಸಿನ ಕದ ತೆಗೆದು
ನೀ ಕೊಟ್ಟ ನವಿಲುಗರಿ…!!

ರಾಜ್…!!
ಮಕ್ಕಳಿಲ್ಲದ ತಾಯಿಗೆ
ಗಭ೯ದ ಬೆಲೆ ಗೊತ್ತು
ಬಸಿರಾಗದ ನೋವು
ಅರಿಯುವರಾರು…

ಹತ್ತು ಮಕ್ಕಳ ಹಡೆದವ್ವ 
ಗಂಡು ಕೂಸಿಲ್ಲದೆ
ಲೋಕದ ಕೊಂಕಿಗೆ
ಮೌನದಿ ಕೊರಗಿಹಳು…

ಹರೆಯದ ಹುಡುಗಾಟದಿ
ಬಸಿರಾದ ಹುಡುಗಿಗೆ
ಕರುಳ ಬಳ್ಳಿಯ ಕೂಸು
ಬೆಟ್ಟದ ಹೊರೆಯಂತೆ…

ಬೇಡದ ಬಸಿರಿಗೆ
ಗಂಡು ಮಗು ಹುಟ್ಟಿದೊಡೆ
ವಂಶೋಧ್ದಾರಕನೆನ್ನುವ
ಖುಷಿಯುಂಟೆ…!!

ರಾಜ್…!!
ಕಾದಿಹಳು ರಾಧೆ
ಅಲ್ಲಿ ನಿನಗಾಗಿ
ಮೋಹನ ಮುರುಳಿಯೆ
ನಿನ್ನಯ ಪ್ರೀತಿಗಾಗಿ..

ಯುಗ-ಯುಗಗಳೆ ಕಳೆದರು
ಅವಳ ಪ್ರೀತಿ ಬತ್ತಿಲ್ಲ
ರಾಧೆ ಮರೆತ ನಿನ್ನಿಂದ
ಪ್ರೀತಿಯಿನ್ನು ಸಿಕ್ಕಿಲ್ಲ..

ಭಾಮೆ-ರುಕ್ಮಿಣಿಯರೊಡನೆ
ನಿತ್ಯ ನಿನ್ನ ರಂಗೀನಾಟ
ಪ್ರೀತಿ ಕಾದ ರಾಧೆಗಲ್ಲಿ
ವಿರಹದಿ ನರಳಾಟ..

ಗೋಕುಲನಂದನ ಸ್ತ್ರೀಲೋಲ
ಕೇಳು ರಾಧೆಯ ಗೋಳ
ಕಾದಿಹ ರಾಧೆಯ ನೋಯಿಸದಿರು
ನಿರ್ಮಲ ಪ್ರೀತಿಯ ಕಾಯಿಸದಿರು..

ಒಪ್ಪಿಕೋ ಕೃಷ್ಣ
ರಾಧೆಯ ಪ್ರೀತಿ
ನೀಡಬಾರದೆ ನೀ
ಕಾಯುವಿಕೆಗೆ ಮುಕ್ತಿ,..?

ರಾಜ್...!!!
 —
ಸಾವಿಲ್ಲದ ಮನೆಯ
ಸಾಸಿವೆಯ ತರಲು
ಸಂತ ತಾ ಹೇಳಿದ
ಕಂದನ ಬದುಕಿಸಲು..

ಸಾಸಿವೆಯ ಹುಡುಕುತಿಹೆ
ಸಾವಿಲ್ಲದ ಮನೆಯಿಲ್ಲ
ಸಾಸಿವೆಯು ಸಿಗುತಿಲ್ಲ
ಎಲ್ಲೆಲ್ಲೂ ಸೂತಕದ ಛಾಯೆ..

ಹೇಗೆ ಬದುಕಿಸಲಿ
ನಾ ಮುದ್ದು ಕಂದನ
ಬೇರೊಂದು ದಾರಿಯ
ಹೇಳೆಂದಳು ಸಂತನ..

ಸಂತೈಸುತ ಸಂತ
ಮಾತೋಂದ ಹೇಳಿದ
ಹುಟ್ಟು-ಸಾವುಗಳೆರಡು
ನೀರ ಮೇಲಣ ಗುಳ್ಳೆ..

ಹುಟ್ಟಿದ ಪ್ರತಿ ಜೀವಿ
ಅದು ನಶಿಸಲೆಬೇಕು
ಸೃಷ್ಠಿಯ ಕ್ರಿಯೆಯಿದು
ನಿತ್ಯ-ನಿರಂತರವದು..!!

ರಾಜ್..!!

(ಗೌತಮ ಬುದ್ದನ ಚರಿತ್ರೆಯಲ್ಲಿ ಬರುವ
ಒಂದು ಸಂಭಾಷಣೆಯಿಂದ ಪ್ರೇರಿತ)
ಯಾವ ಜನ್ಮದ ಮೈತ್ರಿಯೊ
ನಮ್ಮ ಪ್ರೀತಿಯ ಬಂಧನ
ಈ ಜನುಮದ ಋಣ ತೀರಿತು
ಕೊನೆಯಾಯಿತು ಸಂಭಂದ…

ಕೊನೆವರೆಗೂ ಜೊತೆಗಿರುವ 
ಕನಸಿನಲಿ ನಾನಿದ್ದೆ
ಕನಸಿನ ಕತ್ಹಿಸುಕಿ
ಬಹುದೂರ ನೀ ಹೊದೆ…

ನಿನ್ನ ನಟನೆಯ ಪ್ರೀತಿ
ನಿಜವೆಂದು ನಾ ತಿಳಿದೆ
ಪ್ರೀತಿ ಚಂಚಲವೆಂದು
ನೀನಿಂದು ತೋರಿಸಿದೆ…

ಕಾಯುವೆ ನಾ ನಿನಗಾಗಿ
ಜನುಮ - ಜನುಮದಲೂ
ಹೊಸ ಹೆಸರಿನೊಂದಿಗೆ
ಹೊಸ ಉಸಿರಿನೊಂದಿಗೆ…!!

ರಾಜ್…!!
ಚೂರಾದ ಕನ್ನಡಿಯಲ್ಲಿ 
ನೂರಾರು ಬಿಂಬಗಳು 
ಪ್ರತಿಯೊಂದು ಬಿಂಬದಲೂ 
ನಿನ್ನದೇ ಪ್ರತಿಬಿಂಬಗಳು… 

ಒಡೆದ ನನ್ನ ಹೃದಯದಲ್ಲು 
ಬರಿ ನಿನ್ನದೇ ನೆನಪುಗಳು
ಪ್ರತಿಯೊಂದು ನೆನಪಿನಲ್ಲೂ
ನಿನ್ನ ಪ್ರೀತಿಯ ಕುರುಹುಗಳು…

ಇರುಳಾದರೆ ಕಾಡುವ ಕನಸುಗಳು
ವಿರಹದಿ ನರಳಿವೆ ನರನಾಡಿಗಳು
ಅಣುಕಿಸಿ ನಗುತಿವೆ ನೆನಪುಗಳು
ನನ್ನನೆ ನೋಡಿ ಹಗಲಿರುಳು…

ಒಡೆದ ಕನ್ನಡಿ ಅದು
ಅಪಶಕುನವೆನ್ನುವುದಾದರೆ
ಒಲವ ಕಡೆಗಣಿಸಿ
ಹೃದಯ ಒಡೆದವಳು…??

ರಾಜ್…!!