Tuesday 28 October 2014

ಮಡುಗಟ್ಟಿದ ಮನದ ದುಗುಡ
ಕರಗಿದೆ ಕಣ್ಣೀರ ಮಳೆಯಾಗಿ
ಸಾಂತ್ವನದ ಸ್ವಾತಂತ್ರ್ಯ
ಮುದುಡಿದ ಮನಸಿಗೆ…

ಕಾಣುವ ಕನಸುಗಳೆಲ್ಲ
ಕಾಡುವ ನೆನಪುಗಳಲ್ಲ
ಗುರಿತಪ್ಪಿದ ಕನಸುಗಳೇ
ಸತ್ತು ನೆನಪಾಗಿ ಕಾಡುವವು…

ಪ್ರೀತಿ ಬಳಿ ಬಂದಾಗ
ಕಾಲಡಿಯ ಕಸದಂತೆ ಕಂಡು
ಬಯಸಿ ಬೇಕೇಂದರು ಈಗ
ಅದು ಪರರ ಸೊತ್ತು…

ಮತ್ತೆ ಚಿಗುರುವುದೇ ಪ್ರೀತಿ
ಸತ್ತ ಭಾವನೆಗಳಲಿ
ಮರೆತ ನೆನಪದು ಕೂಡ
ಸುಪ್ತ ಮನಸಿನಲಿ…

ಮನದ ದುಗುಡ ಕರಗಿ
ಹಗುರಾಗಿದೆ ಮನ
ಹಳೇ ಕೊಳೆಯು ತೊಳೆದು
ಹೊಸ ನೀರು ಹರಿದಂತೆ…!!

1 comment:

  1. ಬಯಸಿ ಬೇಕೇಂದರು ಈಗ
    ಅದು ಪರರ ಸೊತ್ತು…

    ನಮ್ಮೆಲ್ಲರ ಬದುಕಲ್ಲೂ ಇಂತಹ misಗಳ ಕಹಿ ನೆನಪಿದೆ ಅಲ್ಲವೇ!

    ReplyDelete