Wednesday 18 February 2015


ಮನಸಿನ ಕನ್ನಡಿಯಲ್ಲಿ
ಮೌನದ ಬಿಂಬ ಮಾತಾಡಿ
ಮನಕ್ಕು - ಮೌನದ ನಡುವೆ
ಅಂತರವ ಹೆಚ್ಚಿಸಿದೆ....

ಅಂತರಂಗದ ನೋವ
ಅರಿತುಕೊಳ್ಳುವರಾರು
ಅರಿಯದೇ ಮಾಡಿದ ತಪ್ಪಿಗೆ
ಮನ್ನಿಸಿ ಮುದ್ದಿಸುವರಾರು...

ಒಲವ ಸೇತುವೆಯಲ್ಲಿ
ಛಲವುಂಟು ಬಲವುಂಟು
ಮನದ ಅಂಗಳದಲ್ಲಿ
ಸಹಿಸದ ಬಿರುಗಾಳಿಯ ...

ಕಾದು ನಿಂತಿಹ ಮನಕೆ
ಮೌನದಿ ಒಂದು ನಮನ
ಕಾಣದ ಚಿಂತೆಗೆ ಕದಡಿ
ರಾಡಿಯಾಗಿದೆ ನನ್ನೀ ಮನ...

ನೆನಪೊಂದು ನೆಪವಾಗಿ
ಕನಸ ಕೊಲ್ಲುತಿದೆ
ಮನದೊಳಗಿನ ಮಾತು
ಒಳಗೊಳಗೇ ಸಾಯುತಿದೆ ...!!

ಇನ್ನೇಷ್ಟು ದಿನ ಹೀಗೆ
ಮೌನದಾಶ್ರಯದಲ್ಲಿ
ಸೆರೆಯಾಗಿ ನೀ ನಿರುವೆ
ಆಸರೆಯು ಇನ್ನಾರು ನನಗೆ...

ಇಂದೊಳ್ಳೆ ದಿನವುಂಟು
ಪ್ರೀತಿಗೆ ಜಾತ್ರೆಯಿದು
ನೀಡಿಬಿಡು ನನಗೊಂದು
ಪ್ರೀತಿಯ ಉಡುಗೊರೆ...

ಮನದೊಳಗೆ ಕೊರಗುತಲಿ
ಹೃದಯಕ್ಕೆ ಗಾಯವು
ಹಾರಿಬಿಡು ಹೊರಗಿನ್ನು
ಬಚ್ಚಿಟ್ಟ ಪ್ರಿತಿ ಹಕ್ಕಿ...

ಇತಿಹಾಸ ಪುಟದೊಳಗೆ
ಹಲವಾರು ಪ್ರೆಮಕಾವ್ಯ
ಅರಳಿ ನಿಂತಿವೆ ಇಲ್ಲಿ
ಪರಿಶುಧ್ದ ಪ್ರೀತಿಗೆ ಆಧಾರವಾಗಿ..

ತಡಮಾಡದೇ ಹೇಳಿಬಿಡು
ಕಾಡದಿರು ಸುಮ್ಮನೇ
ಇನ್ನೇಷ್ಟು ದಿನ ಹೀಗೆ
ಕಾಯುವ ಶಿಕ್ಷೆಯು...!!

ಅರಿಯದೇ ಹುಟ್ಟುವ ಪ್ರೀತಿ
ಅರಿತ ಮೇಲುಳಿಯುವುದೇ
ಓ ಪ್ರೀತಿ ನಿನಗೆಂದೇ
ದಿನವೊಂದು ಬೇಕೇ?

ಪ್ರೀತಿಯಲಿ ಮೊದಮೊದಲು
ಜಗವೆಲ್ಲ ಕಾಮನಬಿಲ್ಲು
ಹೃದಯಕ್ಕೊ ಹಗಲಿರುಳು
ಅದೇ ಕನಸಿನ ಅಮಲು ....

ಕಳೆದಂತೆ ದಿನಗಳು
ಕಳೆಯುವವು ಕ್ಷಣಗಳಲಿ
ಉಳಿಯುವುದೇ ಅದೇ ಪ್ರೀತಿ
ಇರೊ ಒಂದೇ ಜನುಮದಲಿ ...

ಉಳಿದು ಬೆಳೆಯುವವೆಷ್ಟೊ
ಅಳಿದು ಮಲಗುವವೆಷ್ಟೊ
ಹುಟ್ಟುವುದೇ ಹೊಸ ಪ್ರೀತಿ
ಹಳೇ ಭಾವನೆಗಳ ಮರೆಸಿ ...

ಗೆದ್ದ ಪ್ರೀತಿಯು ತಾ
ಮೆರೆಯುವುದು ಗತ್ತಿನಲಿ
ಸತ್ತ ಪ್ರೀತಿಯು ಮರು ಹುಟ್ಟುವುದು
ನೆನಪಾಗಿ ಕವಿತೆಯಲಿ ...!!

ರಾಜ್ ..!

ಸುರಿಸು ಬಾ ಒಲವ ಮಳೆಯ
ಸೊರಗಿದೆ ಕೊರಗಿದೆ ನೀನಿಲ್ಲದೇ
ನೀ ಬಿತ್ತಿ ಹೋದ ಪ್ರೀತಿಯ ಬಳ್ಳಿ
ಕಾದಿದೆ ಮರಳಿ ಬಾ ಮಳೆಯೊಂದಿಗೆ ...

ಹೃದಯದ ಅಂಗಳದಲಿ
ಪ್ರೀತಿಯ ಚಿತ್ತಾರವ ಬಿಡಿಸಿ
ನಿನ್ನ ನೆನಪೊಂದ ಕಾವಲಿಗೆ ಬಿಟ್ಟು
ಕಾರಣವ ತಿಳಿಸದೆ ಕಣ್ಮರೆಯಾದೆ ...

ಭಾವನೆಗಳೆಲ್ಲ ಬತ್ತಿ
ನನ್ನ ಹೃದಯವೀಗ ಮರಭೂಮಿ
ಸಿಗದ ಪ್ರೀತಿಯ ಸೆಳೆತವೇ
ಒಲವಿನ ಒರತೆ ಹುಡುಕಲೆಲ್ಲಿ...

ನೆನಪೊಂದಿಗೆ ಸೆಣಸಾಡಿ
ಸೋತಿದೆ ಮನಸು
ನನಸಾಗದ ಕನಸಿಗೆ
ಒಲಿಸಿಕೊಳ್ಳುವ ಬಯಕೆ ...

ಕಾಡಿದ ಕನಸೊಂದಿಗೆ
ಕೂಡಿ ನೆನೆಯುವ ಆಸೆ
ಕಾದಿಹೆನು ಗೆಳತಿ ಮರಳಿ ಬಾ
ಒಲವ ಮಳೆಯೊಂದಿಗೆ ...!!

ರಾಜ್ ..!
ಅವಳ
ಚಂಚಲತೆಗೆ
ಚಂದಿರ
ಕೂಡ
ಚೂರೆ
ಚೂರಾಗಿ
ಕರಗುವನು
ದಿನಂಪ್ರತಿ ...
ಪಾಪದ
ಹುಡುಗನ
ಪಾಡೇನು
ಪಾಪಿ
ಕನಸದು
ಇಷ್ಟಿಷ್ಟೇ
ಕೊಲ್ಲುವುದು ...
ಮನಸಿಗೆ
ಮೈಲಿಗೆಯಾಗಿದೆ
ಕಾರಣ
ಪ್ರೀತಿ
ಸಂಭಂಧದ
ನೆನಪೂ
ಇಂದು
ಮರಣಿಸಿದೆ ..!!
ಕೈಗೂಡದ
ಬಯಕೆಗಳು
ಮನದಾಳದಲ್ಲಿ
ಹುದುಗಿ
ಹೊರ
ಬರುವ
ಭಾವಗಳೆ
ಕವಿತೆಗಳು ...

Monday 2 February 2015


ನೆನಪು ನಡೆದು ಹೋದ
ದಾರಿತುಂಬ ಪ್ರೀತಿ ಕುರುಹು
ಹೀಗೊಂದು ಧನ್ಯವಾದ
ಕನಸ ಕೊಂದು ಹೋಗಿದ್ದಕ್ಕೆ....

ಕಣ್ಣ ಮುಂದೆ ಬರಿಯ ಕತ್ತಲೆ
ಕುರುಡು ಪ್ರೀತಿಯ ಪರಿಯಿದು
ಮೌನವೊಂದೆ ಮನದ ಗೆಳೆಯ
ಪ್ರೀತಿ ಸುಟ್ಟ ಗಾಯಕ್ಕೀಗ ....

ಹೃದಯವೀಗ ಬರಡು ಭೂಮಿ
ಕಳೆಯ ಕೊಳೆಯೆ ಹರಡಿದೆ
ಕೊಳೆಯ ತೊಳೆದು ಪ್ರೀತಿ ಬೆಳೆಸೊ
ಒಲವ ಮಳೆಯು ಸುರಿವುದೇ ....

ನೆನಪು ತೊರೆದು ಹೋದ
ದಾರಿ ತುಂಬ ಹರಡಿಕೊಂಡ
ನರಳಿನಿಂತ ಹೃದಯದ
ತುಂಬು ಹೃದಯದ ಧನ್ಯವಾದ ..!!

(ನನ್ನ ಸ್ನೇಹ ತೋಟದ ಹೂಗಳಿಗೆ ಅಪ೯ಣೆ)

ನನ್ನೆದೆಯ ಹೂದೋಟದಿ
ಅರಳಿದಂಥ ಮಲ್ಲಿಗೆ
ನಮ್ಮ ಸ್ನೇಹ ಮಂದಿರದಿ
ನಗುತಿರು ನೀ ಪ್ರತಿಕ್ಷಣ ...

ದಾರಿ ಮುಳ್ಳು ನನಗಿರಲಿ
ಹೆಜ್ಜೆ ಗುರುತೇ ದಾರಿದೀಪ
ನೋವ ನೆರಳು ಸುಳಿಯದಿರಲಿ
ನಿನ್ನನೆಂದು ಕಾಡದಿರಲಿ ...

ಮಗುವಿನಂತೆ ಮಲಗು ನೀನು
ಕನಸಾಗಿ ಕಾಯುವೆನು
ನಿದಿರೆಯಲ್ಲು ನಗುವಿರಲಿ
ಸ್ನೇಹಕ್ಕಾಗಿ ಸಾಯುವೆನು ...

ನನ್ನೆದೆಯ ಹೂದೋಟದಿ
ಅರಳಿನಿಂತ ಪುಷ್ಪವೇ
ಉಸಿರು ನಮ್ಮ ಮರೆಯುವರೆಗೂ
ಸ್ನೇಹ ಜ್ಯೋತಿ ಆರದಿರಲಿ ...!!

ರಾಜ್ ..!!!
ಆಕಸ್ಮಿಕವಾಗಿ
ಅಂಟಿದ
ನಂಟೊಂದು
ಅಂಕೆಗೆ
ಸಿಗದೇ
ಅಂತರಂಗದಲ್ಲಿ
ಅವಿತು
ಕುಳಿತ
ನೆನಪಿಗೀಗ
ನಾನೊಬ್ಬ
ಅನಾಮಿಕ ...!!!

----------------------------------------------------------
ಧುತ್ತನೇ
ಎದುರಾಗಿ
ಕಾಡುವ
ನೆನಪಿಗೂ
ನೋವಾಗಿದೆ
ಇಂದು
ತನ್ನೊಳಗೆ
ಬಚ್ಚಿಟ್ಟ
ಭಾವನೆಗಳ
ತಿವಿಯುವಿಕೆಯ
ತೀವ್ರತೆಯಿಂದ ....!!

ಕಣ್ಣು ಮಾಡುವ ತಪ್ಪಿಗೆ
ಮನವು ಬೆಂಬಲವಿತ್ತು
ಕನಸು ಕೈಗೂಡದೆ
ನೆನಪಾಗಿ ಕಾಡಿದರೆ...

ನೋವಿನಲೂ ಸಮಪಾಲು
ಮಾಡಿದ ಕಣ್ತಪ್ಪಿಗೆ
ಹಂಬಲಿಸಿ ನೀಡಿದ
ಹುಂಬತನದ ಒಪ್ಪಿಗೆ...

ಕನಸು ಕರಗುವುದು
ನೆನಪು ಮರಗುವುದು
ಕಣ್ಣಿಗು-ಮನಸಿಗೂ
ನೋವಿನ ಬಳುವಳಿ...

ಜನುಮದ ನಂಟಿದೆ
ನಡುವಲ್ಲಿ ನಂಜಿದೆ
ಅಳಿಸಲಾಗದ ಗುರುತು
ಅತ್ತ ಕಣ್ಣೀರಿನ ಕಲೆ...

ಕಣ್ಣು ಮಾಡುವ ತಪ್ಪಿಗೆ
ಮನವು ಬೆಂಬಲವಿತ್ತು
ಕಾಡುವುದು ಕೊನೆವರೆಗೂ
ಈ ಪ್ರೀತಿಯ ಖಾಯಿಲೆ..!!

ರಾಜ್..!!
ಮನದ
ರಥಬೀದಿಯಲ್ಲಿ
ನೆನಪ
ಮೆರವಣಿಗೆ
ಸಾಗಿದೆ
ಸಂತಸದ
ಸುಳಿವಿಲ್ಲ
ಕಾರಣ
ಬಳಿಯಲ್ಲಿ
ಅವಳಿಲ್ಲ 

---------------------------------------------------

ಕಲ್ಪನೆಯಲ್ಲಿ
ಭಾವತೀವ್ರತೆ 
ತುಂಬಿ
ನಿನ್ನ
ನೆನಪಲ್ಲೆ
ಕವಿತೆಯೊಂದು
ಜನಿಸಿದೆ
ಏನೆಂದು
ಹೆಸರಿಡಲಿ
ಕನಸೆಂದು
ಕರೆಯಲೆ.?

ಮೌನದ ರಾತ್ರಿಗೆ
ನೆನಪಿನ ಆಸರೆ
ಒಲವಿನ ಲಾಲಿಗೆ
ಹೃದಯವು ಕಾದಿದೆ ...

ಚಂದ್ರನ ಬೆಳಕಲು
ಕಾಡುವ ಕತ್ತಲು
ಕನಸದೊ ಹೆದರಿದೆ
ಕಣ್ಣಲಿ ಇಳಿಯಲು ...

ನಲ್ಮೆಯ ಒಲವೆ
ನನ್ನಯ ಕನಸೇ
ನೀ ಹಾಡಿಬಿಡು
ಲಾಲಿಯ ಹಾಡೊಂದ...

ಕೇಳುತ ಮಲಗುವೆ
ಲಾಲಿಯ ಹಾಡನು
ನಿನ್ನಯ ನೆನಪಲೇ
ಮರೆಯುವೆ ನನ್ನನೆ ...

ಮೌನದ ರಾತ್ರಿಗೆ
ನೆನಪಿನ ಆಸರೆ
ಒಲವಿನ ಸಾಲಿಗೆ
ಹೃದಯವು ಕಾದಿದೆ ...!

ನನ್ನೊಳಗಿನ ಕವಿಯ
ಅಕಾಲಿಕ ಮರಣವಾಗಿದೆ
ಬರೆದರೂ ಕವಿತೆ
ಭಾವನೆಗಳಿಲ್ಲದೆ ಬರಡು ...

ಹೆಕ್ಕಿ ತಂದು ಅಕ್ಷರಗಳ
ಒಪ್ಪವಾಗಿ ಜೋಡಿಸಿ
ಬರೆದ ಕವಿತೆಗೀಗ
ಹೇಗೆ ತುಂಬಲಿ ಭಾವನೆಗಳ ....

ಭಾವವಿಲ್ಲದ ಕವಿತೆ
ಜೀವವಿಲ್ಲದ ದೇಹದಂತೆ
ಸಿಂಗರಿಸಿದ ಅಕ್ಷರಗಳ
ಕಳೆಬರಹ ನನ್ನೀ ಕವನ ...

ಕಾಣದ ಕಡಲಿಗೆ
ಹಂಬಲಿಸಿ ಈ ಮನ
ಕಾರಣವಾಯಿತೆ ಕವಿಯ ಮರಣಕ್ಕೆ
ತಬ್ಬಲಿಗಳಾದವು ಕವಿಯ ಕವಿತೆಗಳೀಗ ...!!!