Wednesday 10 September 2014

ಪಾವ೯ತಿಯ ಮೈಯ
ಮಣ್ಣಿನಿಂದ ಹುಟ್ಟಿಬಂದ
ಜಗದ ಒಡೆಯ ಈಶನಿಗೆ
ಸ್ವಂತಕ್ಕಾದ ಸುತನು ಈತ…

ಮಾತೃ ವಾಕ್ಯ ಪಾಲನೆಗೆ
ತಂದೆಯೊಡನೆ ಯುದ್ಧ ಮಾಡಿ
ಆನೆ ಪ್ರಾಣ ಬಲಿಯ ಕೊಟ್ಟು
ಸಾವ ಗೆದ್ದ ಧೀರ ಸುತನು…

ಇಲಿಯನೇರಿ ಜಾರಿ ಬಿದ್ದು
ನೋಡಿ ನಕ್ಕ ಚಂದಿರಂಗೆ
ಶಾಪ ಕೊಟ್ಟು ಹಿರಿಮೆ ಮೆರೆದ
ಲೋಕಮಾತೆ ಮುದ್ದು ಕಂದ…

ವಿಘ್ನಗಳ ಕೊಡದೆ ಕಾಡೊ
ಏಕದಂತದೊಡೆಯ ಸ್ವಾಮಿ
ಸವ೯ ಜನಕೆ ಶಾಂತಿ ನೀಡಿ
ಕರುಣೆಯಿಂದ ಕಾಯೋ ದೇವ…!!

(ಗಣೇಶ ಚತುರ್ಥಿ ಶುಭಾಶಯಗಳು )

2 comments: