Wednesday 10 September 2014

ಮತ್ತದೇ ಏಕಾಂತ
ನೇಸರನಿಗೆ ಧಾವಂತ
ಇಳಿಸಂಜೆ ಇಳಿದು
ಅದೇ ಬಾನು ಅದೇ ಚಂದ್ರ...

ಕಡಲ ದಡದಲ್ಲಿ
ಭಾವಗಳ ಅಲೆ ಉಕ್ಕಿ
ಕಾವ್ಯದ ಜನನ
ಕಳೆದ ಕ್ಷಣಗಳ ನೆನೆದು...

ಮನದೊಳಗಣ ತಲ್ಲಣ
ಕಣ್ನಲ್ಲಿ ಮಳೆಯಾಗಿ
ಹರಿದೊಡೆ ಹೊರಗೆ
ಹಗುರ ಹತ್ತಿಯು ಹೃದಯ...

ಬದುಕು ಬಿತ್ತಿದ ಕನಸು
ಬಳಲಿ ಬೆಂಡಾಗಿ ಒಣಗಿ
ಮತ್ತದೇ ಏಕಾಂತ
ಮತ್ತೆ ಕಾಡುವ ನೆನಪು...!!!

ರಾಜ್..!!

No comments:

Post a Comment