Friday 10 January 2014

ಸಾವಿಲ್ಲದ ಮನೆಯ
ಸಾಸಿವೆಯ ತರಲು
ಸಂತ ತಾ ಹೇಳಿದ
ಕಂದನ ಬದುಕಿಸಲು..

ಸಾಸಿವೆಯ ಹುಡುಕುತಿಹೆ
ಸಾವಿಲ್ಲದ ಮನೆಯಿಲ್ಲ
ಸಾಸಿವೆಯು ಸಿಗುತಿಲ್ಲ
ಎಲ್ಲೆಲ್ಲೂ ಸೂತಕದ ಛಾಯೆ..

ಹೇಗೆ ಬದುಕಿಸಲಿ
ನಾ ಮುದ್ದು ಕಂದನ
ಬೇರೊಂದು ದಾರಿಯ
ಹೇಳೆಂದಳು ಸಂತನ..

ಸಂತೈಸುತ ಸಂತ
ಮಾತೋಂದ ಹೇಳಿದ
ಹುಟ್ಟು-ಸಾವುಗಳೆರಡು
ನೀರ ಮೇಲಣ ಗುಳ್ಳೆ..

ಹುಟ್ಟಿದ ಪ್ರತಿ ಜೀವಿ
ಅದು ನಶಿಸಲೆಬೇಕು
ಸೃಷ್ಠಿಯ ಕ್ರಿಯೆಯಿದು
ನಿತ್ಯ-ನಿರಂತರವದು..!!

ರಾಜ್..!!

(ಗೌತಮ ಬುದ್ದನ ಚರಿತ್ರೆಯಲ್ಲಿ ಬರುವ
ಒಂದು ಸಂಭಾಷಣೆಯಿಂದ ಪ್ರೇರಿತ)

No comments:

Post a Comment