ಗೆಳತಿ ಇದು ರಾಮರಾಜ್ಯವಲ್ಲ
ಹೆಣ್ಣನ್ನು ಇಲ್ಲಿ ಪೂಜಿಸುವುದಿಲ್ಲ
ನಡುರಾತ್ರಿ ನಡೆಯಲು ಸ್ವಾತಂತ್ರ್ಯವಿಲ್ಲ
ಮಾನಕ್ಕು-ಪ್ರಾಣಕ್ಕೂ ಮಾರಕ ರೋಗ...
ಗೆಳತಿ ಇದು ದ್ವಾಪರಯುಗವಲ್ಲ
ಮಾನವ ಕಾಪಾಡಲು ಶ್ರೀಕೃಷ್ಣ ಬರುವುದಿಲ್ಲ
ಕೌರವರ ಸಂತತಿಯು ಹೆಚ್ಚಿದೆ ಈಗಂತೂ
ನಿನ್ನಾ ರಕ್ಷಣೆಗೆ ನೀನಾಗಬೇಕು ಮಾರಿ...
ಕಲಿಯುಗದ ಕರಾಳ ದಿನಗಳು
ಕ್ರೌರ್ಯ ತುಂಬಿದ ಪ್ರತಿ ಕ್ಷಣಗಳು
ಸಹೋದರತೆಯ ಮುಖವಾಡದಿ ಕಾಮದ ಕರಿನೆರಳು
ಯಾರ ನಂಬುವುದೋ.? ಮಾನಾ-ಭಿಮಾನ..
ಕಲಿತುಕೊ ಗೆಳತಿ ಸ್ವರಕ್ಷಣೆ..ಕಲಿಯುಗವಿದು
ಬಾರರು ಯಾರಿಲ್ಲಿ ಬರಿ ತಮಾಷೆ ನೋಡುವರು
ಬದಲಾಗಬೇಕು ನೀ ಅಬಲೆಯಲ್ಲ ಸಬಲೆ
ಸ್ತ್ರೀ ಕುಲಕ್ಕೆ ನೀನಾಗು ಸ್ಪೂರ್ತಿಯ ಸೆಲೆ...!!
ರಾಜ್..!
ಹೆಣ್ಣನ್ನು ಇಲ್ಲಿ ಪೂಜಿಸುವುದಿಲ್ಲ
ನಡುರಾತ್ರಿ ನಡೆಯಲು ಸ್ವಾತಂತ್ರ್ಯವಿಲ್ಲ
ಮಾನಕ್ಕು-ಪ್ರಾಣಕ್ಕೂ ಮಾರಕ ರೋಗ...
ಗೆಳತಿ ಇದು ದ್ವಾಪರಯುಗವಲ್ಲ
ಮಾನವ ಕಾಪಾಡಲು ಶ್ರೀಕೃಷ್ಣ ಬರುವುದಿಲ್ಲ
ಕೌರವರ ಸಂತತಿಯು ಹೆಚ್ಚಿದೆ ಈಗಂತೂ
ನಿನ್ನಾ ರಕ್ಷಣೆಗೆ ನೀನಾಗಬೇಕು ಮಾರಿ...
ಕಲಿಯುಗದ ಕರಾಳ ದಿನಗಳು
ಕ್ರೌರ್ಯ ತುಂಬಿದ ಪ್ರತಿ ಕ್ಷಣಗಳು
ಸಹೋದರತೆಯ ಮುಖವಾಡದಿ ಕಾಮದ ಕರಿನೆರಳು
ಯಾರ ನಂಬುವುದೋ.? ಮಾನಾ-ಭಿಮಾನ..
ಕಲಿತುಕೊ ಗೆಳತಿ ಸ್ವರಕ್ಷಣೆ..ಕಲಿಯುಗವಿದು
ಬಾರರು ಯಾರಿಲ್ಲಿ ಬರಿ ತಮಾಷೆ ನೋಡುವರು
ಬದಲಾಗಬೇಕು ನೀ ಅಬಲೆಯಲ್ಲ ಸಬಲೆ
ಸ್ತ್ರೀ ಕುಲಕ್ಕೆ ನೀನಾಗು ಸ್ಪೂರ್ತಿಯ ಸೆಲೆ...!!
ರಾಜ್..!
No comments:
Post a Comment