Monday 17 March 2014

ಅಳಿವಿನಂಚಿಗೆ ಬಂದು ನಿಂತಿದೆ
ಅಗಲಿಕೆ ನೋವಿನಲಿ
ನರಳಿ ನೊಂದಿದೆ
ಈ ಹೃದಯ…

ಅಲ್ಪ -ಸ್ವಲ್ಪ ವೆ
ಉಸಿರಾಡುತಿದೆ
ಅನಪಭವಿಸುತಿದೆ
ನರಕಯಾತನೆ ಸಮಯ…

ಚಂದಿರನು ಮರುಗಿಹನು
ಸಂಸೈಸಿ ಸೋತಿಹನು
ಅವಗಿಲ್ಲದ ನೋವು
ನಿನಗೇತಕೆಂದು ಕೇಳಿಹನು…

ಮಸಣದ ಹಾದಿಯಲಿ
ಕನಸುಗಳ ಮಾರಣಹೊಮ
ನೆನಪುಗಳು ನಡೆದಿವೆ
ಶವಯಾತ್ರೆಯಲಿ ಜೊತೆಗೆ…

ಇನಿಯನು ತಾ ಬರುವನೆ
ಹೊಸ ಉಸಿರ ಜೊತೆಗೆ
ಇಲ್ಲವೆ ಸಂಸ್ಕಾರ ಮಾಡಲು
ಕೊನೆ ಫಳಿಗೆಯಲಿ ಚಿತೆಗೆ…!!

ರಾಜ್…!!

1 comment:

  1. ಉಸಿರಾದರೂ ಅವನೇ ಸಾವಾದರೂ ಅವನೇ ಎಂತಹ ಒಲವ ಭಾವ.

    ReplyDelete