ಕರುಳ ಬಳ್ಳಿಯೊಂದು
ಬಳ್ಳಿಯಿಂದ ದೂರವಾಗಿ
ಹೆತ್ತ ಕರುಳ ಕತ್ತರಿಸಿ
ಕಣ್ಣ ನೀರ ತರಿಸಿದೆ…
ಹೊತ್ತು -ಹೆತ್ತು ಸಲಹಿದವಳ
ಬೆಲೆಯನರಿಯೆ ದೂರತಳ್ಳಿ
ಕರುಣೆ ಮರೆದ ಕಂದನೀಗ
ಕತ್ತರಿಸಿದ ಕರುಳಬಳ್ಳಿ…
ಸತಿಯ ಮಾತು ಕೇಳಿ ತನ್ನ
ಹೆತ್ತ ಕರುಳ ಹೊರೆಯಂದು
ಹೊರಗಟ್ಟಿದ ಮಗರಾಯ
ಹಲಬುತಿತ್ತು ತಾಯಿ ಹೃದಯ…
ಇಂದು -ನಿನ್ನೆ ಬೆಸೆದ ಬಂಧ
ಸತಿ -ಸುತರ ಸಂಬಂಧ
ಎಷ್ಟೆ ಜನುಮ ಜನಿಸಿದರು
ಋಣತೀರದು ಅಮ್ಮ ನಿನ್ನ ಅನುಬಂಧ…
ಮೂಢ ಮನವೆ ಮರೆಯದಿರು
ಹೆತ್ತ ಕರುಳ ನೊಯಿಸದಿರು
ಜನುಮದಾತೆ ನಮಗೆ ಎಲ್ಲ
ತಾಯಿಗಿಂತ ದೇವರಿಲ್ಲ…!!
ರಾಜ್…!!
ಬಳ್ಳಿಯಿಂದ ದೂರವಾಗಿ
ಹೆತ್ತ ಕರುಳ ಕತ್ತರಿಸಿ
ಕಣ್ಣ ನೀರ ತರಿಸಿದೆ…
ಹೊತ್ತು -ಹೆತ್ತು ಸಲಹಿದವಳ
ಬೆಲೆಯನರಿಯೆ ದೂರತಳ್ಳಿ
ಕರುಣೆ ಮರೆದ ಕಂದನೀಗ
ಕತ್ತರಿಸಿದ ಕರುಳಬಳ್ಳಿ…
ಸತಿಯ ಮಾತು ಕೇಳಿ ತನ್ನ
ಹೆತ್ತ ಕರುಳ ಹೊರೆಯಂದು
ಹೊರಗಟ್ಟಿದ ಮಗರಾಯ
ಹಲಬುತಿತ್ತು ತಾಯಿ ಹೃದಯ…
ಇಂದು -ನಿನ್ನೆ ಬೆಸೆದ ಬಂಧ
ಸತಿ -ಸುತರ ಸಂಬಂಧ
ಎಷ್ಟೆ ಜನುಮ ಜನಿಸಿದರು
ಋಣತೀರದು ಅಮ್ಮ ನಿನ್ನ ಅನುಬಂಧ…
ಮೂಢ ಮನವೆ ಮರೆಯದಿರು
ಹೆತ್ತ ಕರುಳ ನೊಯಿಸದಿರು
ಜನುಮದಾತೆ ನಮಗೆ ಎಲ್ಲ
ತಾಯಿಗಿಂತ ದೇವರಿಲ್ಲ…!!
ರಾಜ್…!!
No comments:
Post a Comment