Thursday 6 March 2014

ಹೇ ಹೃದಯಾ
ಒಮ್ಮೆ ಹೇಳಲಾರೆಯಾ
ನನ್ನ ಬಾಳ ಪುಟದಲಿ
ಕವಿತೆಯಾಗಲಾರೆಯಾ…

ಪಲ್ಲವಿ ಇಲ್ಲದ ಚರಣ
ನೀನಿಲ್ಲದ ಈ ಜೀವನ
ತಾಳವು ತಪ್ಪಿದ ಗಾಯನ
ಮನಸಿನ ಮೂಕರೊಧನ…

ಗುಲಾಬಿ ಕೆನ್ನೆಯ
ಕೋಮಲಾಂಗಿಯೆ
ಸುಮ್ಮನೆ ಇದ್ದ ಮನಸಿಗೆ
ಹೊಸ ಕನಸೊಂದ ತೋರಿದೆ…

ಮನದಂಗಳದಿ ಅರಳಿದ ಹೂವೆ
ಮುಳ್ಳಾಗದೆ ಬದುಕಿಗೆ
ಮುಡಿಯಲಿ ನಗುತ
ಪಡೆವ ಸಾಥ೯ಕ ಬದುಕ…!!

No comments:

Post a Comment