ನಿನ್ನ ಸನಿಹ
ಸೇರೊ ತವಕ
ಒಂದೆ ಬಯಕೆ
ನನ್ನಿ ಮನಕೆ…
ನಿನಿತ್ತ ಸುಳಿದಾಗ
ತಂಗಾಳಿ ಹಿತವಾಗಿ
ಬೆರೆಲ್ಲ ಮರೆತಾಗಿದೆ
ನಿನ್ನ ವಿನಹ ಬೇರೆ ಏನಿದೆ…
ಉಸಿರುಸಿರೆ ನಿನಗಾಗಿ
ನನ್ನುಸಿರೆ ನೀನಾಗಿ
ಮನಸಿಂದು ಮಗುವಾಗಿದೆ
ಮಧುರ ಪಿಸುಮಾತಿಗೆ…
ನೀ ಬಂದು ನಿಂತಂತೆ
ನಕ್ಕು ಬಳಿ ಕರೆದಂತೆ
ನಿನ್ನದೇ ಚಟುವಟಿಕೆ
ಕನಸಲ್ಲೂ ಕನವರಿಕೆ …
ನಿನ್ನ ಸನಿಹ
ಸೇರೊ ತವಕ
ಒಂದೇ ಬಯಕೆ
ನನ್ನಿ ಮನಕೆ…!!
ರಾಜ್…!!
No comments:
Post a Comment