Thursday 6 March 2014

ಮನದ ಬೇಗುದಿಯಲ್ಲಿ
ಮೌನದಲಿ ಕಾಡಿದ
ನಿನ್ನ ನೆನಪುಗಳ
ಕತ್ತ್ಹಿಸುಕಿ ಕೊಂದಿರುವೆ…

ಉಸಿರಲ್ಲಿ ಬೆರೆತ ಉಸಿರನ್ನ
ಹೃದಯದಲ್ಲಿ ಬಲಿತ
ನನ್ನ ಪ್ರೀತಿಯನ್ನ
ಕಸಿ ಮಾಡಿ ತೆಗೆದಿರುವೆ…

ಮಸಣದ ಬೀದಿಯಲ್ಲಿ
ಹೊತ್ತು ಸಾಗುತ್ತಿದ್ದೆನೆ
ನಿನ್ನ ನೆನಪುಗಳ
ಕಳೆಬರಹ…

ಸುತ್ತ ಮುತ್ತಲು ಸುಳಿಯದಿರು
ಮತ್ತೆ ಜೀವ ಬಂದಾತು
ನಿನ್ನ ನೊಡಿದ ಕೂಡಲೆ
ಸತ್ತ ನೆನಪುಗಳಿಗೆ…!!

ರಾಜ್…!!

No comments:

Post a Comment