Monday 17 March 2014

ಹೆಪ್ಪುಗಟ್ಟಿದೆ ಮೌನ
ಸಹನೆಯು ಮಿತಿಮೀರಿ
ಮಾತನಾಡ ಬಯಸಿದೆ…

ಮುಗ್ದ ಮನಸಿಗೆ
ಮುನಿಸಿನಿಂದ ಶಿಕ್ಷೆ
ತರವೇ? ನೀ ಹೇಳೆ…

ಅಂಕದ ಪರದೆ
ಸರಿಯುವ ಮುನ್ನ
ಬಿಂಕವ ತೊರೆದು…

ಮೌನ ಮಾತಾಡುತಿದೆ
ಓ ಒಲವೆ ಕಿವಿಗೊಟ್ಟು
ಕೇಳು ನೀನೊಮ್ಮೆ…!!

ರಾಜ್…!!.

No comments:

Post a Comment