Tuesday 12 November 2013

ದೇಹದೊಳಗಿನ ಉಸಿರು
ಎಣ್ಣೆಯಿಲ್ಲದ ದೀಪದಂತೆ
ಯಾವಾಗ ನಿಲ್ಲುವುದೋ
ಹೊತ್ತಿಲ್ಲ-ಗೊತ್ತಿಲ್ಲ...

ಮರಣವೆಂಬ ಮುಕ್ತಿ
ಬರುವುದಂತು ಖಚಿತ
ಅದು ಬರುವ ಮುನ್ನ
ಹೇಳೊಲ್ಲ-ಕೇಳೊಲ್ಲ...

ನಾಳೆ ಎನ್ನುವುದು ಕನಸು
ನನಸಾಗುವ ಭರವಸೆಯಿಲ್ಲ
ಇಂದು ಎನ್ನುವುದಷ್ಟೆ
ನಮ್ಮ ಬಳಿಯಿರುವ ಸತ್ಯ...

ಜನನ-ಮರಣಗಳೆರಡು
ನೀರ ಮೇಲಣ ಗುಳ್ಳೆ
ಹುಟ್ಟು ಆಕಸ್ಮಿಕವಷ್ಷೆ
ಸಾವು ಅನಿವಾರ್ಯವಯ್ಯ...!!!

$~ ರಾಜ್ ಪಾಟೀಲ್~$

No comments:

Post a Comment