Tuesday 3 December 2013

ಬಿಸಿಲು-ಮಳೆ-ಗಾಳಿ ಲೆಕ್ಕಿಸದೆ
ಬೆವರಿನ ಜೊತೆ ನೆತ್ತರನು ಹರಿಸಿ
ನಾಡಿನ ಜನತೆಯ ಹಸಿವನ್ನು ನೀಗಿಸುವ
ನೇಗಿಲ ಯೋಗಿಯ ಕಣ್ಣೀರ ಕಥೆಯಿದು...

ನಮ್ಮೆಲ್ಲರ ಉಸಿರಾಟಕೆ
ತನ್ನುಸಿರ ಕಡೆಗಣಿಸಿ
ಭೂತಾಯಿ ಮಡಿಲಲ್ಲಿ
ಹಸಿರೆಲ್ಲೆಡೆ ತಾ ಬೆಳೆಸಿ...

ಬಿತ್ತಿದ ಬೆಳೆಗಳಿಗೆ
ತಕ್ಕ ಫಲ ಪಡೆಯದೆ
ಮೋಸಗಾರರ ಜಾಲದಲಿ
ಬಲಿಪಶೂ ತಾನಾದ...

ಬಡತನದ ಬೇಗೆಯಲಿ
ಕೊನೆಗವಗೆ ಸಿಕ್ಕಿದ್ದು
ಕಣ್ಣೀರು-ನಿಟ್ಟುಸಿರು
ಮರಣದ ಉಡುಗೊರೆ...

ಕಣ್ಣಿದ್ದು ಕುರುಡರು ನಾವು
ಕಾಳಜಿಯು ನಮಗಿಲ್ಲ
ನೊಂದರೆ ಅನ್ನದಾತ
ತೊಂದರೆಯು ನಮಗೆಲ್ಲ...!!!

ರಾಜ್..!!

No comments:

Post a Comment