Monday 4 January 2016

ಮತ್ತದೇ ಏಕಾಂತತೆ
ಗೊಂದಲದ ಗೂಡಾಗಿದೆ
ಮನದಾಳದಿ ನೀರವತೆ
ಖಾಲಿ ಖಾಲಿಯಾದ ಭಾವನೆಗಳು ...


ಬದುಕೆಂಬ ಬಡಪೆಟ್ಟಿಗೆಯಲ್ಲಿ
ಬರಿ ದುಖದ ಸರಕುಗಳೆ
ರೋಸಿಹೊಗಿದೆ ಮನ
ಸಂಬಂಧಗಳ ಕಪಟತೆಗೆ ...

ಅನುದಿನವೂ ರಾಜಿಸೂತ್ರ
ಆತಂಕದ ಆಡಂಬರಕ್ಕೆ
ಕುಬ್ಜವಾಗಿದೆ ಸಹನೆ
ಆಸೆಗಳು ಅಣಕಿಸುತಿವೆ ...

ತೊರೆದು ಹೋಗಲೆ ನಾನು
ಎಲ್ಲ ಭವ ಬಂಧಗಳ ಕಳಚಿ
ಅನಂತದ ಆಚೆಗಿನ ಬದುಕಿಗೆ
ಅನಿಶ್ಚಿತತೆಯ ಬದುಕ ಬದಿಗೊತ್ತಿ ...

ತೊರೆದು ಹೋಗಲೆ ಈಗಲೇ
ಕಾಣದ ಆ ಕಡಲಿಗೆ
ನನ್ನಮ್ಮನ ಮಡಿಲಿಗೆ
ಕಳೆದು ಹೋಗುವ ಮುನ್ನ... !!!

No comments:

Post a Comment