Wednesday 9 October 2013

ಪಯಣ

ಬಹುದೂರಾ ಹೊರಟಿಹೆನು
ನಾ ಹೋಗಿ ಬರಲೆ
ನೀನಿರದ ಬಾಳಲ್ಲಿ
ನಂಗೇನು ಕೆಲಸ.....

ನಿನ್ನೊಲವ ಬಯಸಿ
ಕಾದಿದ್ದೆ ಬಂತು
ಒಲವಿನ ಮೋಡ ಕರಗಲೆಇಲ್ಲ
ಪ್ರೀತಿಯ ಮಳೆ ಹನಿ ಅದು ಸುರಿಸಲಿಲ್ಲ....

ಈ ಹೃದಯ ಬತ್ತಿ
ಮರಭೂಮಿಯಾಗಿಹುದು
ಭೀಕರ ಬರಗಾಲಕ್ಕೆ
ತುತ್ತಾಗಿ ಹೋಗಿಹುದು...

ತುಸು ಪ್ರೀತಿ ತೋರಿ ಕೂಗಿದರೆ ಒಮ್ಮೆ
ಹಿಂತಿರುಗಿ ನಾ ಬರುವೆ
ಕಾದಿಹೆನು ನಾನಿಲ್ಲಿ
ಕೂಗುವೆಯಾ ನೀನೊಮ್ಮೆ....

ಕೊನೆಗೊಂದು ಸಾರಿ
ನೀ ಬಂದು ನೋಡು
ಬಹುದೂರಾ ಹೊರಟಿಹೆನು
ಇನ್ನೆಂದು ಬರದಿರೆನು...!!!

$~ ರಾಜ್ ಪಾಟೀಲ್ ~$

1 comment: