Sunday 22 March 2015


ಬಲು ಪ್ರಯಾಸದಿ
ಜನಿಸಿದೆ ನನ್ನೀ
ಕವಿತೆಯು ಹಳೇ
ನೆನಪುಗಳ ಬೆಂಬತ್ತಿ...

ಒಲುಮೆಯ ಬಳ್ಳಿಯು
ಜೊತೆಯಾಗದೆ ಜರಿದು
ದೂರ ತಳ್ಳಿದೆ ಇಂದು
ಒಬ್ಬಂಟಿ ಕವಿಯೀಗ...

ಪ್ರಸವ ವೇದನೆಯು
ಕವಿಯ ಎದೆತುಂಬ
ಪ್ರೀತಿಯ ಅಪೂಣ೯ತೆಗೆ
ಕವಿತೆಯು ವಿಕಲಾಂಗ...

ಕವಿಯ ಹೃದಯದಲಿ
ಭಾವನೆಗಳು ಮೇಳೈಸಿ
ಹುಟ್ಟಿಕೊಂಡಿದೆ ಕವಿತೆ
ಅವಳದೇ ನೆನಪಲ್ಲಿ..!!

2 comments:

  1. ನಿಮಗನಿಸಬಹುದೇನೋ,
    ಪ್ರೀತಿಯ ಅಪೂಣ೯ತೆಗೆ
    ಕವಿತೆಯು ವಿಕಲಾಂಗ

    ನಮಗಂತೂ ಇದು ಪರಿಪೂರ್ಣ ವಿರಹ ಗೀತೆ!

    ReplyDelete