ಬಲು ಪ್ರಯಾಸದಿ
ಜನಿಸಿದೆ ನನ್ನೀ
ಕವಿತೆಯು ಹಳೇ
ನೆನಪುಗಳ ಬೆಂಬತ್ತಿ...
ಒಲುಮೆಯ ಬಳ್ಳಿಯು
ಜೊತೆಯಾಗದೆ ಜರಿದು
ದೂರ ತಳ್ಳಿದೆ ಇಂದು
ಒಬ್ಬಂಟಿ ಕವಿಯೀಗ...
ಪ್ರಸವ ವೇದನೆಯು
ಕವಿಯ ಎದೆತುಂಬ
ಪ್ರೀತಿಯ ಅಪೂಣ೯ತೆಗೆ
ಕವಿತೆಯು ವಿಕಲಾಂಗ...
ಕವಿಯ ಹೃದಯದಲಿ
ಭಾವನೆಗಳು ಮೇಳೈಸಿ
ಹುಟ್ಟಿಕೊಂಡಿದೆ ಕವಿತೆ
ಅವಳದೇ ನೆನಪಲ್ಲಿ..!!
ನಿಮಗನಿಸಬಹುದೇನೋ,
ReplyDeleteಪ್ರೀತಿಯ ಅಪೂಣ೯ತೆಗೆ
ಕವಿತೆಯು ವಿಕಲಾಂಗ
ನಮಗಂತೂ ಇದು ಪರಿಪೂರ್ಣ ವಿರಹ ಗೀತೆ!
ಧನ್ಯವಾದಗಳು ಸರ್
ReplyDelete