ಸಮಯವೇ ಸಹಕರಿಸು
ಓಡದಿರು ಸರಸರನೇ
ವಿಶ್ರಮಿಸು ಕೆಲಹೊತ್ತು
ಧಾವಂತದ ನಡೆ ಬೇಡ ...
ಬದುಕಿನ ಜಂಜಾಟದಲಿ
ನಗಲು ಪುರುಸೊತ್ತಿಲ್ಲ
ಉಭಯಕುಶಲೋಪರಿಯು
ವ್ಯವಹಾರದ ಸರಕಾಗಿದೆ ...
ಸಂಬಂಧಗಳ ನಡುವಲ್ಲಿ
ಸಮನ್ವಯದ ಕೊರತೆ
ಮನೆ - ಮನಗಳಲ್ಲಿ
ಏಕಾಂತವು ಆವರಿಸಿದೆ ...
ಕನಸಿಗೂ - ಮನಸಿಗು
ಸಮಯವೇ ವೈರಿಯು
ಅರಿತುಕೊಳ್ಳುವ ಮುನ್ನ
ಅಗಲಿಕೆಯ ಶಿಕ್ಷೆಯೆ ...
ಸಮಯವೇ ಸಹಕರಿಸು
ಓಡದಿರು ಸರಸರನೇ
ನನಗೆಂದೆ ತುಸು ಸಮಯ
ಕೊಡಬಾರದೆ ನೀ...!!
ಓಡದಿರು ಸರಸರನೇ
ವಿಶ್ರಮಿಸು ಕೆಲಹೊತ್ತು
ಧಾವಂತದ ನಡೆ ಬೇಡ ...
ಬದುಕಿನ ಜಂಜಾಟದಲಿ
ನಗಲು ಪುರುಸೊತ್ತಿಲ್ಲ
ಉಭಯಕುಶಲೋಪರಿಯು
ವ್ಯವಹಾರದ ಸರಕಾಗಿದೆ ...
ಸಂಬಂಧಗಳ ನಡುವಲ್ಲಿ
ಸಮನ್ವಯದ ಕೊರತೆ
ಮನೆ - ಮನಗಳಲ್ಲಿ
ಏಕಾಂತವು ಆವರಿಸಿದೆ ...
ಕನಸಿಗೂ - ಮನಸಿಗು
ಸಮಯವೇ ವೈರಿಯು
ಅರಿತುಕೊಳ್ಳುವ ಮುನ್ನ
ಅಗಲಿಕೆಯ ಶಿಕ್ಷೆಯೆ ...
ಸಮಯವೇ ಸಹಕರಿಸು
ಓಡದಿರು ಸರಸರನೇ
ನನಗೆಂದೆ ತುಸು ಸಮಯ
ಕೊಡಬಾರದೆ ನೀ...!!
ಸಮಯಕೂ ತುಸು ಹೃದಯ ವೈಶಾಲ್ಯತೆ ಬೇಕು ಅಂತೀರಿ ತಾವುಗಳು.
ReplyDelete