ಬೇಡುವ ಜನಗಳ ಕೋರಿಕೆ ಆಲಿಸಿ
ಭಕ್ತಿ ಭಾವವ ತುಲನೆಯ ಮಾಡಿ
ಬೇಡಿದ ವರಗಳ ನೀಡುವ ದೇವರು
ತಾರತಮ್ಯವ ಮಾಡುವನು...
ಸಿರಿವಂತರಿಗೆ ಹಣವನು ನೀಡಿ
ಬಡವರ ಬಡತನ ಜಾಸ್ತಿ ಮಾಡಿ
ಗುಡಿಸಿಲಿನೊಳಗಡೆ ಬೆಳಕಾಗದೆ
ಅರಮನೆಯೊಳಗೆ ಸೆರೆಯಾಗಿಹನು...
ದರುಶನ ಪಡೆಯಲು ಬಗೆಬಗೆ ಪಾಳಿಯು
ವಿಧವಿಧ ಸೇವೆಗೆ ಥರ ಥರ ಬೆಲೆಯು
ಕಾಣಿಕೆ ಹೆಚ್ಚಿರೆ ದೇವರ ಹತ್ತಿರ
ಬರಿಯ ಪ್ರಾರ್ಥನೆ ದೇವರು ಎತ್ತರ...
ಹಿಂದಿನ ಕಾಲದಿ ತಪಸ್ಸಿಗೆ ಮೆಚ್ಚಿ
ದರುಶನ ಭಾಗ್ಯ ಕರುಣಿಸುತ್ತಿದ್ದ
ಕಲಿಯುಗದೊಳಗೆ ಮಂದಿರದಲ್ಲಿ
ಮಾರುಕಟ್ಟೆಯ ಸರಕಾಗಿಹನು...
ಜಗದ ತುಂಬೆಲ್ಲ ಅನ್ಯಾಯ ಹೆಚ್ಚಿದೆ
ದುಡ್ಡಿನ ಮದದಿ ನ್ಯಾಯವು ಸತ್ತಿದೆ
ಎಲ್ಲ ಬಲ್ಲಹ ಆ ಸೃಷ್ಠಿಕರ್ತನು
ಭಕ್ತಿ ಭಾವವ ತುಲನೆಯ ಮಾಡಿ
ಬೇಡಿದ ವರಗಳ ನೀಡುವ ದೇವರು
ತಾರತಮ್ಯವ ಮಾಡುವನು...
ಸಿರಿವಂತರಿಗೆ ಹಣವನು ನೀಡಿ
ಬಡವರ ಬಡತನ ಜಾಸ್ತಿ ಮಾಡಿ
ಗುಡಿಸಿಲಿನೊಳಗಡೆ ಬೆಳಕಾಗದೆ
ಅರಮನೆಯೊಳಗೆ ಸೆರೆಯಾಗಿಹನು...
ದರುಶನ ಪಡೆಯಲು ಬಗೆಬಗೆ ಪಾಳಿಯು
ವಿಧವಿಧ ಸೇವೆಗೆ ಥರ ಥರ ಬೆಲೆಯು
ಕಾಣಿಕೆ ಹೆಚ್ಚಿರೆ ದೇವರ ಹತ್ತಿರ
ಬರಿಯ ಪ್ರಾರ್ಥನೆ ದೇವರು ಎತ್ತರ...
ಹಿಂದಿನ ಕಾಲದಿ ತಪಸ್ಸಿಗೆ ಮೆಚ್ಚಿ
ದರುಶನ ಭಾಗ್ಯ ಕರುಣಿಸುತ್ತಿದ್ದ
ಕಲಿಯುಗದೊಳಗೆ ಮಂದಿರದಲ್ಲಿ
ಮಾರುಕಟ್ಟೆಯ ಸರಕಾಗಿಹನು...
ಜಗದ ತುಂಬೆಲ್ಲ ಅನ್ಯಾಯ ಹೆಚ್ಚಿದೆ
ದುಡ್ಡಿನ ಮದದಿ ನ್ಯಾಯವು ಸತ್ತಿದೆ
ಎಲ್ಲ ಬಲ್ಲಹ ಆ ಸೃಷ್ಠಿಕರ್ತನು
ಮೌನದಿ ಕುಳಿತು ಮರೆತಂತಿಹನು...!!!
No comments:
Post a Comment