Saturday 28 September 2013

"ಲೈಫ್ ಲೈನ್..."



ಬ್ರಹ್ಮ ಬರೆದ ಹಣೆಯ ಬರಹ
ನನ್ನ ಬಾಳಲಿ ನೂರು ತರಹ
ಕರುಣೆಯ ಪುಟಗಳ ಖಾಲಿ ಇಟ್ಟ
ಸಂಕಷ್ಟಗಳ ಉಡುಗೊರೆ ಕೊಟ್ಟ

ಪ್ರೀತಿಯ ಬಳ್ಳಿ ಚಿಗುರಲೆ ಇಲ್ಲ
ಐಶ್ವಯೃ ಲಕ್ಷ್ಮಿ ಒಲಿಯಲು ಇಲ್ಲ
ವಿದ್ಯೆಗೆ ತಕ್ಕ ಉದ್ಯೋಗ ಸಿಗದೆ
ಹೊಂದಾಣಿಕೆಯೆ ಜೀವನವಾಗಿದೆ

ಹೊಸ ಹೊಸ ಕನಸು ಕಾಣಲು ಭಯವು
ವಿಫಲತೆ ನೋವು ಸಹಿಸದಿ ಮನವು
ಯಾಕೋ ಬ್ರಹ್ಮ ಮೋಸವ ಮಾಡಿದೆ
ಕರುಣೆಯ ತೋರದೆ ಸುಮ್ಮನೆ ಕಾಡಿದೆ

ಬ್ರಹ್ಮ ಬರೆದ ಹಣೆಯ ಬರಹ
ನನ್ನ ಬಾಳಲಿ ನೂರು ತರಹ
ನೀಡುವುದಾದರೆ ಒಂದು ವರವ
ಅಳಿಸುವೆ ಬ್ರಹ್ಮ ನಿನ್ನಯ ಬರಹ...!!!

$~ ರಾಜ್ ಪಾಟೀಲ್~$ —

No comments:

Post a Comment