Saturday 28 September 2013

ಓಡದಿರಿ ಮೋಡಗಳೆ
ಬಹುದೂರಾ ನೀವು
ಮುಂಗಾರು ಮಳೆಗಾಗಿ
ಕಾದಿಹೆವು ನಾವು

ಹನಿ ನೀರು ಸುರಿಯದೆ
ಇಳೆ ಕೂಡಾ ಕಾದಿದೆ
ರೈತನ ಮುಖದಲ್ಲಿ
ಬರದ ಚಿಂತೆ ಕಾಡಿದೆ

ಮಳೆ ಬರದೆ ಹೋದರೆ
ಬೆಳೆ ಬೆಳೆಯಲಾಗದು
ಬೆಳೆ ಬೆಳೆಯದಿದ್ದರೆ
ಈ ಬದುಕು ಸಾಗದು

ಓ ವಾಯು ದೇವಾ
ನೀ ತೋರು ಕೃಪೆಯಾ
ಒಯ್ಯದಿರು ಮುಂದಕ್ಕೆ
ಮೋಡಗಳೆ ಜೋತೆಯಾ

ಮೋಡಗಳೆ ಕರಗಿ
ತುಸು ನೀರು ಸುರಿಸಿ
ಎಲ್ಲರ ಮೊಗದಲ್ಲಿ
ಸಂತಸವ ಹರಿಸಿ....!!!

$~ರಾಜ್ ಪಾಟೀಲ್ ~$ 

No comments:

Post a Comment