ಮತ್ತೆ ಹುಟ್ಟಿ ಬಾ ಓ ಗಾಂಧಿತಾತ
ನೀ ಬಿಟ್ಟು ಹೊದ ಈ ದೇಶ ನೊಡು
ಕಂಡಿದ್ದಿ ರಾಮರಾಜ್ಯದ ಕನಸು
ಬರಿ ರಾವಣರೆ ತುಂಬಿಹರು ಸುತ್ತೆಲ್ಲ...
ನೀ ತೊರಿದ ಅಹಿಂಸೆಯ ಹಾದಿಯಲ್ಲಿ
ಬರಿ ಹಿಂಸೆಗಳನೆ ಮಾಡುತಿಹರು
ಶಾಂತಿ ಮಂತ್ರವ ಮರೆತುಬಿಟ್ಟು
ಅಶಾಂತತೆಯ ಹುಟ್ಟು ಹಾಕಿ...
ಸ್ವಾಥ೯ ಸಾಧನೆಗೆ ದೇಶವನೆ ಬಲಿಕೊಟ್ಟು
ಮುಗ್ದ ಜನಗಳ ನಡುವೆ
ಜಾತಿ ಮತಗಳ ವಿಷ ಬೀಜ ಬಿತ್ತಿ
ನೆಮ್ಮದಿಯ ಜೀವನಕೆ ಕೊಳ್ಳಿಯನು ಇಟ್ಟಿಹರು...
ಹೆಣ್ಣು ಹೊನ್ನು ಮಣ್ಣಿಗಿಲ್ಲಿ
ಭದ್ರತೆಯು ಕನಸಂತೆ
ರಕ್ಷಕರೆ ಭಕ್ಷಕರಾಗಿ
ರಕ್ಷಣೆಯ ಮರೆತಿಹರು...
ಕೆಟ್ಟದನ್ನು ಕೇಳದಂತೆ,ನೋಡದಂತೆ
ಕೆಟ್ಟ ಮಾತು ಆಡದಂತೆ
ಹೇಳಿಹೊದೆ ಅಂದು ನೀನು
ಆದರಿಲ್ಲಿ ಕೆಟ್ಟತನವೆ ಸವ೯ವ್ಯಾಪಿ...
ಮತ್ತೆ ಹುಟ್ಟಿ ಬಾ ಗಾಂಧಿ ತಾತ
ನೀ ಬಿಟ್ಟು ಹೊದ ಈ ದೇಶದಲ್ಲಿ
ಕಾಣದಿರು ಮತ್ತೊಮ್ನೆ ರಾಮರಾಜ್ಯದ ಕನಸು
ಕೆಟ್ಟ ಮನಸುಗಳ ನಡುವೆ ನನಸಾಗದು ಕನಸು.!
@ ರಾಜ್ ಪಾಟೀಲ್ @
No comments:
Post a Comment